Advertisement

ಚಿತ್ರಕಲಾ ಪರಿಷತ್ತಿನಲ್ಲಿ ಕಲಾಕೃತಿ ಲೋಕ ಅನಾವರಣ

10:29 AM Nov 09, 2019 | Suhan S |

ಬೆಂಗಳೂರು: ದೈವಜ್ಞ ಬ್ರಾಹ್ಮಣ ಸಮಾಜದ ದೈವಜ್ಞ ಕಲಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ “ಮೆರಾಕಿ ಚಿತ್ರಕಲಾ ಪ್ರದರ್ಶನ’ಕ್ಕೆ ಶುಕ್ರವಾರ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ.ಸಿ.ಎನ್‌.ಮಂಜುನಾಥ್‌, ಹಿರಿಯ ಕಲಾವಿದರು ರಚಿಸಿದ ವಿವಿಧ ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ಕಲಾ ಕೃತಿಗಳು ಒಂದಕ್ಕಿಂತ ಭಿನ್ನವಾಗಿದ್ದು, ಒಂದೊಂದು ಕಲಾಕೃತಿ ಭಿನ್ನ-ಭಿನ್ನ ಕತೆ ಹೇಳುತ್ತಿವೆ ಎಂದು ಶ್ಲಾ ಸಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌, ಹಿರಿಯ ಚಿತ್ರಕಲಾವಿದ ಮಿಲಂದ್‌ ನಾಯಕ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪರಿಷತ್ತಿನ ಡಿ.ದೇವ ರಾಜ ಅರಸ್‌ ಗ್ಯಾಲರಿಯಲ್ಲಿ ಭಾನುವಾರದ ವರೆಗೆ ಮೆರಾಕಿ ಚಿತ್ರಕಲಾ ಪ್ರದರ್ಶನ ನಡೆಯಲಿದ್ದು ಸುಮಾರು 38 ಹಿರಿಯ ಕಲಾವಿದರ ವಿವಿಧ ಶೈಲಿಯ ಕಲಾಕೃತಿಗಳು ಪ್ರದರ್ಶನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next