Advertisement

ಕೃಷ್ಣ ಟಾಕೀಸ್‌ನಲ್ಲಿ ಕಿಚ್ಚ ನ ಧ್ವನಿ

09:58 AM Nov 12, 2019 | Suhan S |

ನಟ ಸುದೀಪ್‌ ಸಾಕಷ್ಟು ಸಿನಿಮಾಗಳನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಅದು ಆಡಿಯೋ ಬಿಡುಗಡೆ ಇರಲಿ, ಟೀಸರ್‌, ಟ್ರೇಲರ್‌ ರಿಲೀಸ್‌ ಆಗಿರಲಿ ಅಥವಾ ಸಿನಿಮಾಗೆ ಹಿನ್ನೆಲೆ ಧ್ವನಿ ಇರಲಿ, ಹಾಡುವುದೇ ಇರಲಿ ತಮ್ಮ ಬಿಝಿ ಕೆಲಸದ ನಡುವೆಯೂ ಅವರು ಸಹಕರಿಸಿ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಈಗ ಅಜೇಯ್‌ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಹಾಡೊಂದನ್ನು ಹಾಡುವುದಾಗಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಸುದೀಪ್‌ ಒಳ್ಳೆಯ ಗಾಯಕರು ಅನ್ನೋದು ಎಲ್ಲರಿಗೂ ಗೊತ್ತು. ಅವರು ಸುಮ್ಮನೆ ಹಾಡಲು ಒಪ್ಪುವುದಿಲ್ಲ. ಸಾಹಿತ್ಯ ಇಷ್ಟವಾಗಬೇಕು, ಟ್ಯೂನ್‌ ಚೆನ್ನಾಗಿದೆ ಎನಿಸಬೇಕು. ಎಲ್ಲದ್ದಕ್ಕೂ ಹೆಚ್ಚಾಗಿ, ಟ್ರೆಂಡಿ ಸಾಂಗ್‌ ಅಂದರೆ ಅವರು ಹಾಡಲು ಮುಂದಾಗುತ್ತಾರೆ.

ಅಷ್ಟಕ್ಕೂ ಸುದೀಪ್‌ ಹಾಡಲು ಒಪ್ಪಿರೋದು ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರಿಗಾಗಿ. ಹೌದು, ಸುದೀಪ್‌ ಅವರನ್ನು ಇತ್ತೀಚೆಗೆ ಶ್ರೀಧರ್‌ ವಿ. ಸಂಭ್ರಮ್‌ ಅವರು ಭೇಟಿಯಾಗಿ ಹಾಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಹಾಡುವ ಟ್ರಾಕ್‌ ಸಾಂಗ್‌ ಅನ್ನು ಸಹ ಸುದೀಪ್‌ ಅವರಿಗೆ ಕೇಳಿಸಿದ್ದಾರೆ. ಹಾಡು ಕೇಳಿದ ಸುದೀಪ್‌, ಇಷ್ಟಪಟ್ಟು, ಹಾಡುವುದಾಗಿ ಹೇಳಿದ್ದಾರೆ.

ಅಂದಹಾಗೆ, ಪ್ರಮೋದ್‌ ಮರವಂತೆ ಮತ್ತು ಅಭಿ ಎಸ್‌. ಇಬ್ಬರೂ ಸೇರಿ ಬರೆದಿರುವ “ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗಾಗ್ತದೆ ಜೀವಕ…’ ಎಂಬ ಹಾಡಿಗೆ ಸುದೀಪ್‌ ಅವರು ಧ್ವನಿಯಾಗಲಿದ್ದಾರೆ. ಈ ಚಿತ್ರವನ್ನು ವಿಜಯ್‌ ಆನಂದ್‌ ನಿರ್ದೇಶಿಸಿದ್ದು, ಗೋವಿಂದರಾಜು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿದಿದ್ದು, ಒಂದು ಫೈಟ್‌ ಚಿತ್ರೀಕರಿಸಿದರೆ, ಚಿತ್ರ ಪೂರ್ಣಗೊಳ್ಳಲಿದೆ. ಸದ್ಯಕ್ಕೆ “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಡಬ್ಬಿಂಗ್‌ ಕೆಲಸ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next