Advertisement
ಮಾನಕರ ಅವರು ಅಧಿಕಾರ ವಹಿಸಿಕೊಂಡ ಬಳಿಕ ದುಂದುವೆಚ್ಚ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಜಿಪಂ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರೇ ಮಾಡುತ್ತಿದ್ದಾರೆ. 79 ಸಾವಿರ ಮೊತ್ತದ ಬೆಲೆ ಬಾಳುವ ಹ್ಯಾಂಡಿಕ್ಯಾಮ್ ಕ್ಯಾಮರಾ ಹಾಗೂ 87,500 ಆ್ಯಪಲ್ ಮೊಬೈಲ್ ಖರೀದಿ ಮಾಡಿದ್ದಾರೆ. ಹುಬ್ಬಳ್ಳಿಯ ಸಾನ್ವಿ ಎಂಟರ್ ಪ್ರೈಜಿಸ್ನಲ್ಲಿ ಖರೀದಿ ಮಾಡಿ, ಸೆ.12ರಂದು ಜಿಪಂನ ಯೋಜನೆಯೇತರ ಅನುದಾನದಡಿ ಇರುವ ಹಣ ಪಾವತಿಸಿದ್ದಾರೆ. ಇದು ಈಗ ವಿವಾದ ಪಡೆದಿದೆ.
Related Articles
Advertisement
ಅಮಾನತು-8ನೇ ದಿನದಲ್ಲಿ ಪುನಃ ಆದೇಶ: ಸಿಇಒ ಅಧಿಕಾರ ವಹಿಸಿಕೊಂಡ ಬಳಿಕ ಈ ವರೆಗೆ ವಿವಿಧ ಇಲಾಖೆಗಳ 8 ಜನ ಸಿಬ್ಬಂದಿ (ಶಿಕ್ಷಕರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ)ಯನ್ನು ಕರ್ತವ್ಯಲೋಪದಡಿ ಅಮಾನತುಗೊಳಿಸಿದ್ದಾರೆ. ಆದರೆ, ಅಮಾನತುಗೊಳಿಸಿದ 8ನೇ ದಿನಗಳಲ್ಲಿ ಬೇರೆಡೆ ಪುನಃ ನೇಮಕ ಮಾಡಲಾಗಿದೆ. ಹೀಗಾಗಿ ಪುನಃ ನೇಮಕ ಮಾಡಲು ಅವಕಾಶವಿದೆಯೇ ಎಂಬುದು ಸದಸ್ಯರ ಪ್ರಶ್ನೆ.
ನಮ್ಮ ಕ್ಷೇತ್ರದ ಯಾವುದೇ ಸಮಸ್ಯೆ ಹೇಳಿದರೆ 5 ಸಾವಿರ ಮೇಲ್ಪಟ್ಟು ಅನುದಾನದಲ್ಲಿ ಏನೇ ಖರೀದಿ ಮಾಡಬೇಕಿದ್ದರೂ ಜಿಪಂ ಸಾಮಾನ್ಯ ಸಭೆಯ ಅನುಮತಿ ಬೇಕು ಎಂಬುದು ನಿಯಮ ಹೇಳಲಾಗುತ್ತದೆ. ಆದರೆ, 80ರಿಂದ 90 ಸಾವಿರ ಮೊತ್ತದ ಮೊಬೈಲ್, ಕ್ಯಾಮರಾ-ಲ್ಯಾಪ್ಟಾÂಪ್ ಖರೀದಿಗೆ ಸಾಮಾನ್ಯ ಸಭೆಯ ಅನುಮತಿ ಏಕೆ ಪಡೆಯಲ್ಲ. ಈಗ ಜಿಲ್ಲೆಯಲ್ಲಿ ತೀವ್ರ ಬರವಿದೆ. ಆದರೂ ಇಂತಹ ದುಂದುವೆಚ್ಚ ಅಗತ್ಯವೇ?ಹೂವಪ್ಪ ರಾಠೊಡ, ಜಿಪಂ ಬಿಜೆಪಿ ಸದಸ್ಯ ಸರ್ಕಾರಿ ಕಾರ್ಯಕ್ರಮ ನಿಭಾಯಿಸುವಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ ಉಪಕರಣ ಬಳಸಲಾಗುತ್ತಿದೆ. ತಾವು ಬಳಸುವ ಮೊಬೈಲ್ 87 ಸಾವಿರ ಮೊತ್ತದ್ದಾಗಿದ್ದು, ಇದು ಕಚೇರಿ ಆಸ್ತಿಯಾಗಿದೆ ಹೊರತು, ನನ್ನ ಸ್ವಂತಕ್ಕೆ ಅಲ್ಲ. ನಿಯಮಾವಳಿ ಪ್ರಕಾರ ಖರೀದಿ ಮಾಡಲಾಗಿದೆ. ಮುಂಬರುವ ಸಿಇಒಗೆ ಹಸ್ತಾಂತರಿಸಲಾಗುತ್ತದೆ.
ಗಂಗೂಬಾಯಿ ಮಾನಕರ,
ಜಿಪಂ ಸಿಇಒ ಅಷ್ಟೊಂದು ಬೆಳೆ ಬಾಳುವ ಮೊಬೈಲ್ ಅಗತ್ಯ ಇರಲಿಲ್ಲ. ಮೊಬೈಲ್ ಖರೀದಿಗೆ ನಿಯಮಾವಳಿ ಪ್ರಕಾರ ಅವಕಾಶವಿದ್ದರೂ ದುಬಾರಿ ವೆಚ್ಚದ ಮೊಬೈಲ್ ಏಕೆ ಖರೀದಿ ಮಾಡಬೇಕಿತ್ತು. ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ ಎಂದು ಹೇಳುತ್ತಿದೆ. ಆದರೆ, ನಮ್ಮ ಸಿಇಒ ಅವರು ದುಂದುವೆಚ್ಚ ಮಾಡುತ್ತಿರುವುದು ಎಷ್ಟು ಸರಿ?
ಮುತ್ತಪ್ಪ ಕೋಮಾರ,
ಜಿಪಂ ಉಪಾಧ್ಯಕ್ಷ ಶ್ರೀಶೈಲ ಕೆ. ಬಿರಾದಾರ