Advertisement

ಬಂದರಿನಲ್ಲಿ ಒಂದಲ್ಲ .. ಎರಡಲ್ಲ !

02:23 PM Jul 12, 2018 | Team Udayavani |

ಸದಾ ಜನಜಂಗುಳಿಯಲ್ಲಿ ಗಿಜಿಗುಡುವ ಮಂಗಳೂರಿನ ಬಂದರ್‌ನಲ್ಲಿ ಕೋಸ್ಟಲ್‌ವುಡ್‌ನ‌ ಭರವಸೆಯ ನಟ ಸಾಯಿಕೃಷ್ಣ ಕುಡ್ಲ ಅವರ ಅಭಿನಯದ ಕನ್ನಡ ಸಿನೆಮಾವೊಂದು ಸದ್ದಿಲ್ಲದೆ ಶೂಟಿಂಗ್‌ ಮುಗಿಸಿದೆ. ‘ರಾಮ ರಾಮ ರೇ’ ಸಿನೆಮಾ ನಿರ್ದೇಶಕ ಸತ್ಯಪ್ರಕಾಶ್‌ ಆ್ಯಕ್ಷನ್‌ ಕಟ್‌ ಹೇಳಿದ ಈ ಸಿನೆಮಾದ ಹೆಸರು ‘ಒಂದಲ್ಲ.. ಎರಡಲ್ಲ..!

Advertisement

ಸ್ಮಿತಾ ಉಮಾಪತಿ ನಿರ್ಮಾಣದ ಈ ಸಿನೆಮಾ ವಿಭಿನ್ನ ಲುಕ್‌ನಲ್ಲಿ ಮೂಡಿಬಂದಿದ್ದು, ಇದರ ಟ್ರೇಲರ್‌ ಬುಧವಾರ ಸಂಜೆ ಬಿಡುಗಡೆಯಾಗಿದೆ. ರಂಗಭೂಮಿಯ ಕಲಾವಿದರನ್ನು ಮುಖ್ಯಭೂಮಿಕೆಯಲ್ಲಿಟ್ಟು ಈ ಸಿನೆಮಾ ಸ್ಯಾಂಡಲ್‌ವುಡ್‌ನ‌ಲ್ಲಿ ಸಾಕಷ್ಟು ನಿರೀಕ್ಷೆ ಕೂಡ ಮೂಡಿಸಿದೆ. ಕದ್ರಿ, ಬಂಟ್ಸ್‌ಹಾಸ್ಟೆಲ್‌ ಸಹಿತ ಮಂಗಳೂರಿನ ವಿವಿಧ ಭಾಗದಲ್ಲಿ ಸಿನೆಮಾದ ಶುಟಿಂಗ್‌ ನಡೆದಿದೆ. ಹೆಚ್ಚಾ ಕಡಿಮೆ ಆಗಸ್ಟ್‌ನಲ್ಲಿ ಈ ಸಿನೆಮಾ ರಾಜ್ಯಾದ್ಯಂತ ತೆರೆಕಾಣಲಿದೆ. ಹುಡುಗನೊಬ್ಬನ ಕಥೆಯನ್ನು ಒಂದಲ್ಲ.. ಎರಡಲ್ಲ ಮೂಲಕ ವಿಶೇಷವಾಗಿ ಚಿತ್ರೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next