Advertisement

ಇಮ್ರಾನ್‌ ಹೊಸ ಪ್ರಧಾನಿ, ಅವರಿಗೊಂದು ಚಾನ್ಸ್‌ ಕೊಡಬೇಕು: ಮೆಹಬೂಬ

12:21 PM Feb 19, 2019 | Team Udayavani |

ಶ್ರೀನಗರ : ”ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕ್‌ ಶಾಮೀಲಾಗಿರುವುದಕ್ಕೆ  ಪುರಾವೆ ಇರುವುದರಿಂದಲೇ ಭಾರತ, ಪಾಕಿಸ್ಥಾನವನ್ನು ಹೊಣೆ ಮಾಡಿದೆ; ನಿಮ್ಮ ದೇಶ ಎಲ್ಲಕ್ಕಿಂತ ಮೊದಲು ನುಡಿದಂತೆ ನಡೆಯಬೇಕು” ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಚಾಟಿ ಬೀಸಿದ್ದಾರೆ.

Advertisement

”ಪಠಾಣ್‌ಕೋಟ್‌ ಉಗ್ರ ದಾಳಿಯ ಬಗ್ಗೆಯೂ ನಿಮಗೆ ಪುರಾವೆ ನೀಡಲಾಗಿತ್ತು. ಆದರೂ ನೀವು ಆ ಬಗ್ಗೆ ಕ್ರಮತೆಗೆದುಕೊಳ್ಳಲಿಲ್ಲ” ಎಂದು ಇಮ್ರಾನ್‌ ಗೆ ಮೆಹಬೂಬ ತಿರುಗೇಟು ನೀಡಿದ್ದಾರೆ. 

”ಹಾಗಿದ್ದರೂ ಇಮ್ರಾನ್‌ ಖಾನ್‌ ಈಚೆಗಷ್ಟೇ ದೇಶದ ಪ್ರಧಾನಿ ಆಗಿರುವುದರಿಂದ ಅವರಿಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ  ಒಂದು ಚಾನ್ಸ್‌ ಕೊಡಬೇಕು” ಎಂದಿರುವ ಮೆಹಬೂಬ, ”ಪಾಕ್‌ ವಿರುದ್ಧದ ಯುದ್ಧದ ಮಾತುಗಳು ಮುಂಬರುವ ಚುನಾವಣೆಯಿಂದಾಗಿ ಕೇಳಿ ಬರುತ್ತಿವೆಯೇ ಹೊರತು ಬೇರೇನೂ ಅಲ್ಲ” ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್‌ ನೀಡಿದ್ದಾರೆ. 

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಇಂದು ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ, ‘ಪಾಕಿಸ್ಥಾನ ಈ ಪ್ರಾಂತ್ಯದಲ್ಲಿ ಸ್ಥಿರತೆಯನ್ನು ಬಯಸುತ್ತದೆ; ಪುಲ್ವಾಮಾ ಉಗ್ರ ದಾಳಿಯನ್ನು ನಡೆಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಪೂರಕವಿರುವ ಪುರಾವೆಗಳನ್ನು ಹೊಸದಿಲ್ಲಿ ಕೊಟ್ಟರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next