Advertisement

“ಪಂತ್‌ ಫೀಲ್ಡಿಂಗ್‌ನಲ್ಲಿ ಸುಧಾರಣೆ’

12:47 AM Jul 04, 2019 | Team Udayavani |

ಬರ್ಮಿಂಗ್‌ಹ್ಯಾಮ್‌: ರಿಷಭ್‌ ಪಂತ್‌ ಫೀಲ್ಡಿಂಗ್‌ನಲ್ಲಿ ಬಹಳ ಸುಧಾರಣೆ ಕಂಡುಕೊಂಡಿದ್ದಾರೆ ಎಂದು ಭಾರತ ತಂಡದ ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌ ಹೇಳಿದ್ದಾರೆ.

Advertisement

ಶಿಖರ್‌ ಧವನ್‌ ಗಾಯಾಳಾಗಿ ವಿಶ್ವಕಪ್‌ ಕೂಟದಿಂದ ಹೊರಹೋದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಆಯ್ಕೆ ಯಾದ ರಿಷಭ್‌ ಪಂತ್‌ ಇಂಗ್ಲೆಂಡ್‌ ವಿರುದ್ಧ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಕೀಪರ್‌ ಆದ್ದರಿಂದಲೋ ಏನೋ, ಅವರ ಔಟ್‌ಫೀಲ್ಡ್‌ ಕ್ಷೇತ್ರರಕ್ಷಣೆ ತೀರಾ ಕಳಪೆಯಾಗಿತ್ತು. ಇದರಿಂದ ಸಾಕಷ್ಟು ಟೀಕೆಯನ್ನೂ ಎದುರಿಸಿದ್ದರು.

“ಔಟ್‌ಫೀಲ್ಡ್‌ನಲ್ಲಿ ಪಂತ್‌ ಹೆಚ್ಚು ಚುರುಕಿನಿಂದಿದ್ದರೂ ಚೆಂಡನ್ನು ನಿಧಾನ ಗತಿಯಿಂದ ಎಸೆಯುತ್ತಿದ್ದರು. ಆದರೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಂತ್‌ ಫೀಲ್ಡಿಂಗ್‌ನಲ್ಲಿ ಕೊಂಚ ಸುಧಾ ರಣೆಯನ್ನು ಗುರುತಿಸಿದ್ದೇನೆ’ ಎಂದು ಶ್ರೀಧರ್‌ ಅಭಿಪ್ರಾಯಪಟ್ಟಿದ್ದಾರೆ.

“ದಿನೇಶ್‌ ಕಾರ್ತಿಕ್‌ ಕೂಡ ಕೀಪರ್‌. ಆದರೆ ಅವರು ಔಟ್‌ಫೀಲ್ಡ್‌ನಲ್ಲಿಯೂ ಉತ್ತಮ ಫೀಲ್ಡಿಂಗ್‌ ನಡೆಸುತ್ತಾರೆ. ಫೀಲ್ಡಿಂಗ್‌ ವೇಳೆ ಪಾದರಸದಂತಿರಬೇಕು. ಕಾರ್ತಿಕ್‌, ಧೋನಿ, ಕೊಹ್ಲಿ ಅವರಿಂದ ಫೀಲ್ಡಿಂಗ್‌ ಉಪಾಯಗಳನ್ನು ಕೇಳಿ ಕಲಿ ಯುವುದರಿಂದ ಪಂತ್‌ ಇನ್ನೂ ಉತ್ತಮ ಫೀಲ್ಡಿಂಗ್‌ ನಡೆಸಬಹುದು’ ಎಂದು ಶ್ರೀಧರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next