Advertisement

Server ಸಾಮರ್ಥ್ಯ ಹೆಚ್ಚಿಸಲು ಅಸಾಧ್ಯ: ಸಚಿವ ಮುನಿಯಪ್ಪ

11:13 PM Dec 11, 2023 | Team Udayavani |

ಬೆಳಗಾವಿ: ಬಿಪಿಎಲ್‌ ಪಡಿತರ ಚೀಟಿ ತಿದ್ದುಪಡಿಗಾಗಿ ಹಾಲಿ ಸರ್ವರ್‌ನ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಿಲ್ಲ. ಎನ್‌ಐಸಿಯಿಂದ ಕೆಎಸ್‌ಐಡಿಸಿಗೆ ಆಹಾರ ತಂತ್ರಾಂಶ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಸರ್ವರ್‌ ಸಮಸ್ಯೆಗೆ ಪರಿಹಾರ ಸಿಗಲಿದೆ. ಜತೆಗೆ ಸಾಧ್ಯವಾದಷ್ಟು ಕುಚಲಕ್ಕಿ ನೀಡಲು ಪ್ರಯತ್ನಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

Advertisement

ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಅಶೋಕ ಕುಮಾರ್‌ ರೈ, ಬಿಪಿಎಲ್‌ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಸಾಧ್ಯವಾಗದೆ ಇರುವುದರಿಂದ ಸರಕಾರದಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ಹೇಳಿದರು.

ಅನ್ನಭಾಗ್ಯದಡಿ ಕುಚಲಕ್ಕಿಗೆ ಬೇಡಿಕೆ
ಈಗಾಗಲೇ 10 ಕೆ.ಜಿ. ಅಕ್ಕಿಯ ಪೈಕಿ 5 ಕೆ.ಜಿ. ಅಕ್ಕಿಯನ್ನು ನೀಡುತ್ತಿದ್ದು, ಉಳಿದ 5 ಕೆ.ಜಿ. ಅಕ್ಕಿಯ ಬದಲು ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ನಗದು ಬದಲು ಅಕ್ಕಿ ಕೊಡುವುದಾದರೆ ಕುಚಲಕ್ಕಿ ಕೊಡಿ ಎಂದು ಅಶೋಕ ಕುಮಾರ್‌ ರೈ ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಆಹಾರ ಸಚಿವರು, ಸಾಧ್ಯವಾದಷ್ಟು ಕುಚಲಕ್ಕಿ ಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next