Advertisement

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

11:32 PM Apr 30, 2024 | Team Udayavani |

ಹೊಸದಿಲ್ಲಿ: ಮುಸ್ಲಿಮ್‌ ಉಯಿಲು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ದೇಶದ ಜಾತ್ಯತೀತ ಕಾನೂನುಗಳ ಅಗತ್ಯ ಕುರಿತು ಪರೀಕ್ಷಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

Advertisement

ಈಗ ಮುಸ್ಲಿಂ ವೈಯಕ್ತಿಕ ಶರಿಯಾ ಪ್ರಕಾರ ಪಿತ್ರಾರ್ಜಿತ, ಉತ್ತರಾಧಿಕಾರ ವಿಷಯಗಳ ನಿರ್ಧರಿಸಲಾಗುತ್ತದೆ. ಸಿಜೆಐ ಡಿ.ವೈ.ಚಂದ್ರಚೂಡ ಅವರಿದ್ದ ಪೀಠವು ಈ ಕುರಿತು ಕೇಂದ್ರ ಮತ್ತು ಕೇರಳ ಸರಕಾರಕ್ಕೆ ನೋಟಿಸ್‌ ನೀಡಿದೆ.

ಕೇರಳದ ಸಫಿಯಾ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವೈಯಕ್ತಿಕ ಕಾನೂನು ಬದಲಿಗೆ 1925ರ ಉತ್ತರಾಧಿಕಾರ ಕಾಯ್ದೆ ಆಯ್ಕೆ ಕೋರಿದ್ದರು. ಈ ಹಿನ್ನೆಲೆಯಲ್ಲಿ  ಕೋರ್ಟ್‌, ಹುಟ್ಟಿನಿಂದ ಮುಸ್ಲಿಂನಾಗಿದ್ದರೂ ಬಳಿಕ ಬೇರೆ ಧರ್ಮ ಸ್ವೀಕರಿಸಿದ್ದರೆ ಅವರು ಯಾವ ಕಾನೂನು ಪಾಲಿಸಬೇಕಾಗುತ್ತದೆ ಎಂಬುದರ ಕುರಿತು ಚರ್ಚಿಸುವುದು ಮಹತ್ವದ್ದಾಗಿದೆ ಎಂದು ಸುಪ್ರೀಂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next