Advertisement

ಹೋರಾಟಗಾರರ ತತ್ವಾದರ್ಶ ಅಳವಡಿಸಿಕೊಳ್ಳಿ 

05:33 PM Aug 16, 2018 | Team Udayavani |

ರೋಣ: ನೂರಾರು ವರ್ಷಗಳ ಕಾಲ ನಮ್ಮನ್ನು ಜೀತದಾಳಗಿಸಿಕೊಂಡಿದ್ದ ಬ್ರಿಟಿಷರಿಂದ ಮುಕ್ತಗೊಳಿಸುವಲ್ಲಿ ಮಹಾನ ನಾಯಕರ ಪಾತ್ರ ಬಹುದೊಡ್ಡದು. ಮಹಾನ್‌ ದಾರ್ಶಿನಿಕರ ಮಾರ್ಗದರ್ಶನಲ್ಲಿ ಪ್ರತಿಯೊಬ್ಬರು ನಡೆಯಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್‌, ಪುರಸಭೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಜರುಗಿದ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ರಿಟಿಷರಿಂದ ದೇಶವನ್ನು ಮುಕ್ತಗೊಳಿಸಿದ ನಂತರ ಹಲವು ವರ್ಷಗಳ ಕಾಲ ನಮ್ಮ ದೇಶ ಪರಾವಲಂಬಿಯಾಗಿತ್ತು. ಆದರೆ, ಈಗ ಸದ್ಯ 135 ಕೋಟಿ ಜನರಿಗೂ ಸಾಕಾಗುವಷ್ಟು ಆಹಾರ ಉತ್ಪಾದಿಸುವ ಮೂಲಕ ಸ್ವಾವಲಂಬಿಯಾಗಿದೆ. ಇದಕ್ಕೆ ಕಾರಣ ಈ ದೇಶವನ್ನು ಆಳಿದ ಸರ್ಕಾರದ ನೀತಿ ನಿಯಮಗಳು ಎಂದರು.

ಭಾರತ ದೇಶ ಎಲ್ಲ ರಂಗದಲ್ಲೂ ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಭಯೋತ್ಪಾದಕ ಕೃತ್ಯಗಳನ್ನು ಶಮನ ಮಾಡುವಲ್ಲಿ ಸನ್ನದ್ಧವಾಗಿದೆ. ನಮ್ಮ ಸೈನಿಕರು ಶತ್ರು ರಾಷ್ಟ್ರಗಳ ದಾಳಿ ಎದುರಿಸಲು ಎಲ್ಲ ರೀತಿಯಾದ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಮತ್ತು ದೇಶದ ಸೈನಿಕರ ಸೇವೆ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್‌ ಅಜಿತ ಎಂ. ರೈ, ಪರಕೀಯರ ಕಪಿಮುಷ್ಠಿಯಿಂದ ದೇಶವನ್ನು ಬಂಧ ಮುಕ್ತಗೊಳಿಸಲು ದಿಟ್ಟತನದಿಂದ ಹೋರಾಡಿ, ತ್ಯಾಗ-ಬಲಿದಾನಗೈದ ಮಹಾನ್‌ ದಾರ್ಶಿನಿಕರನ್ನು ನಿತ್ಯ ನೆನೆಯಬೇಕು. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸ್ವಾತಂತ್ರ್ಯ ಹೋರಾಟಗಾರ ಎಸ್‌.ಎಲ್‌. ಪಲ್ಲೇದ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುತ್ತಣ್ಣ ಲಿಂಗನಗೌಡ್ರ, ಅಶೋಕ ನವಲಗುಂದ, ಶಿವಾನಂದ ಜಿಡ್ಡಿವಾಗಿಲ, ಜಿಪಂ ಸದಸ್ಯ ಪಡಿಯಪ್ಪ ಪೂಜಾರ, ಬಸನಗೌಡ ಬಸನಗೌಡ್ರ, ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಇಂದಿರಾ ತೇಲಿ, ಎಂ.ವಿ. ಚಳಗೇರಿ, ಸಿಪಿಐ ಜೆ.ಸಿ. ಪ್ರಕಾಶ, ಶಿವಣ್ಣ ನವಲಗುಂದ, ವಿವಿಧ ಇಲಾಖೆ ಅ ಧಿಕಾರಿಗಳು ಉಪಸ್ಥಿತರಿದ್ದರು. ಬಿಇಒ ನಂಜುಡಯ್ಯ ಸ್ವಾಗತಿಸಿದರು. ಅಕ್ಷರ ದಾಸೋಹ ಅಧಿಕಾರಿ ಎಸ್‌.ಎಸ್‌.ಅಂಗಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next