Advertisement

ಐಎಂಎ ವಂಚನೆ; ವೃದ್ಧೆ ಸಾವು

11:26 PM Jun 15, 2019 | Lakshmi GovindaRaj |

ಮೈಸೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡ ಮೈಸೂರಿನ ವೃದ್ಧೆ ಆಘಾತದಿಂದ ಮೃತಪಟ್ಟಿದ್ದಾರೆ. ಶಾಂತಿನಗರ ನಿವಾಸಿ ವೈ.ರೆಹಮಾನ್‌ ಷರೀಫ್ ಪತ್ನಿ ಸಫ್ರುಬಿ (60) ಮೃತಪಟ್ಟವರು.

Advertisement

ಭಾರೀ ಮೊತ್ತದ ಬಡ್ಡಿ ಹಣದ ಆಸೆಗೆ ಬಿದ್ದು ಸಫ್ರುಬಿ ಅವರ ಕುಟುಂಬ ಐಎಂಎಯಲ್ಲಿ ದೊಡ್ಡ ಮೊತ್ತದ ಹಣ ಕಟ್ಟಿತ್ತು. ಆದರೆ, ವಂಚನೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಲಘು ಹೃದಯಾಘಾತಕ್ಕೊಳಗಾಗಿದ್ದ ಸಫ್ರುಬಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next