Advertisement

ಬಾಬರಿ ಮಸೀದಿ ಕೆಡವಿದ ಬಗ್ಗೆ ಹೆಮ್ಮೆ ಇದೆ ; ಸಾಧ್ವಿ ಪ್ರಜ್ಞಾ ಸಿಂಗ್‌

08:54 AM Apr 22, 2019 | Vishnu Das |

ಹೊಸದಿಲ್ಲಿ : ನನಗೆ ಬಾಬರಿ ಮಸೀದಿ ಧ್ವಂಸಗೈದ ಬಗ್ಗೆ ವಿಷಾದ ಇಲ್ಲ, ಹೆಮ್ಮೆ ಇದೆ ಎಂದು ಭೂಪಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಹೇಳಿಕೆ ನೀಡಿದ್ದಾರೆ.

Advertisement

ಆಜ್‌ತಕ್‌ ಸುದ್ದಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಸಾಧ್ವಿ, ನಾವೇಕೆ ಬಾಬರಿ ಮಸೀದಿ ಧ್ವಂಸಗೈದ ಬಗ್ಗೆ ವಿಷಾದ ಹೊಂದಬೇಕು? ನಮಗೆ ಆ ಬಗ್ಗೆ ಹೆಮ್ಮೆ ಇದೆ. ಆ ಘಟನೆ ದೇಶದ ಸ್ವಾಭಾಮಾನವನ್ನು ಜಾಗೃತಗೊಳಿಸಿದೆ ನಾವು ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣ ಮಾಡುವುದು ಬಿಜೆಪಿಗೆ ರಾಜಕೀಯ ವಿಚಾರವಲ್ಲ ಎಂದು ಸಾಧ್ವಿ ಈ ವೇಳೆ ಹೇಳಿದರು.

ಚುನಾವಣಾ ಆಯೋಗ ಸಾಧ್ವಿಗೆ ನೊಟೀಸ್‌ ನೀಡಿದ್ದು, 24 ಗಂಟೆಗಳ ಒಳಗೆ ಉತ್ತರ ನೀಡುವಂತೆ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next