Advertisement

ನನಗೆ ವರ್ಚಸ್ಸಿಲ್ಲ,ನಾನೊಬ್ಬ ಸಾಮಾನ್ಯ ಕಾರ್ಯಕರ್ತ: ಡಿಕೆಶಿ 

06:20 AM Oct 23, 2018 | |

ಚಿತ್ರದುರ್ಗ: ಬಿಜೆಪಿ ಮುಗಿಸಲು ಪಕ್ಷ ಕಟ್ಟಿದ್ದ ಶ್ರೀರಾಮುಲು ದೊಡ್ಡವರು. ಅವರನ್ನು ನಾವು ಸೋಲಿಸಲು ಆಗುತ್ತದೆಯೇ ಎಂದು ವ್ಯಂಗ್ಯಭರಿತವಾಗಿ ಪ್ರಶ್ನಿಸಿರುವ ಸಚಿವ ಡಿ.ಕೆ. ಶಿವಕುಮಾರ್‌, ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಟ್ರಬಲ್‌ ಶೂಟರ್‌, ತಾವು ಸಿಂಗಲ್‌ ಶೂಟರ್‌ ಎಂದಿರುವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ.

ಶ್ರೀರಾಮುಲು ಅವರನ್ನು ನಾವು ಸೋಲಿಸೋಕಾಗುತ್ತಾ, ಸ್ವತಃ ಪಕ್ಷ ಕಟ್ಟಿ ಬಿಜೆಪಿ ಸೋಲಿಸಲು ಹೊರಟಿದ್ದರು. ನನಗೆ ವರ್ಚಸ್ಸಿದೆ, ಅಧಿಕಾರವಿದೆ ಎಂದು ನಾನೆಲ್ಲೂ ಹೇಳಿಲ್ಲ. ನನಗೆ ವರ್ಚಸ್ಸಿಲ್ಲ. ನಾನೋರ್ವ ಸಾಮಾನ್ಯ ಕಾರ್ಯಕರ್ತ. ಈಗ ಅಧಿಕಾರ ಇದೆ ಎಂದು ತಲೆ ಕೆಡಿಸಿಕೊಂಡೂ ಇಲ್ಲ. ನನ್ನ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡಿದ್ದೇನೆ. ಚುನಾವಣೆ ಮುಗಿದ ಮೇಲೆ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತೇನೆ. ಉಪಚುನಾವಣೆಯ ಐದು ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ನೀಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಜನರ ತೀರ್ಮಾನವೇ ಅಂತಿಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next