Advertisement

ಅನಾರೋಗ್ಯ: ನೆರವಿಗೆ ಮನವಿ

09:02 PM May 08, 2019 | Team Udayavani |

ವಿಟ್ಲ: ಮಂಜೇಶ್ವರ ತಾಲೂಕು ಎಣ್ಮಕಜೆ ಗ್ರಾಮದ ಸಾಯ ಬಾವಲಿಮೂಲೆ ನಿವಾಸಿ, ಐತ ಮಾಯಿಲ ಅವರ ಪುತ್ರ ಆನಂದ (24) ಅವರು ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಸಂಕಷ್ಟಪಡುತ್ತಿದ್ದಾರೆ.

Advertisement

ಅವರಿಗೆ ಸೊಂಟದಿಂದ ಕೆಳಗೆ ಬಲ ವಿಲ್ಲ. ನಡೆಯಲಾಗುತ್ತಿಲ್ಲ. ಹಾಸಿಗೆ ಹಿಡಿ ದಿದ್ದಾರೆ. ಇವರ ತಂದೆ ಮತ್ತು ತಾಯಿ ಕ್ಷಯರೋಗ ಬಾಧಿತರು. ಇವರ ತಂಗಿ ಮಧುಮೇಹದಿಂದ ಬಳಲುತ್ತಿದ್ದಾರೆ. ದುಡಿಯುವ ಸಾಮರ್ಥ್ಯವಿಲ್ಲದ ಈ ಕುಟುಂಬವು ನಾಲ್ಕು ಜನರ ಔಷಧ ಮತ್ತು ಇತರ ಖರ್ಚುಗಳಿಗೆ ಕಷ್ಟಪಡುತ್ತಿದೆ. ಇವರ ಮನೆಯೂ ತೀರ ಶೋಚನಿಯ ಸ್ಥಿತಿ ಯಲ್ಲಿದೆ. ಹಳ್ಳಿಯ ಮೂಲೆಯಲ್ಲಿ ಇರುವ ಇವರನ್ನು ಜನಪ್ರತಿನಿಧಿ ಗಳು, ಅಧಿಕಾರಿಗಳು ಗಮನಿಸಿಲ್ಲ. ಇವರಿಗೆ ಬಿ.ಪಿ.ಎಲ್‌. ರೇಷನ್‌ ಕಾರ್ಡ್‌ ಇದೆ. ಇನ್ನಾವುದೇ ಸರಕಾರಿ ಸೌಲಭ್ಯಗಳು ದೊರಕುತ್ತಿಲ್ಲ.

ದಾನಿಗಳು ಧನಸಹಾಯವನ್ನು ವಿಜಯ ಬ್ಯಾಂಕ್‌ ಕಾಟುಕುಕ್ಕೆ ಶಾಖೆ, ಐತ ಮಾಯಿಲ ಅವರ ಉಳಿತಾಯ ಖಾತೆ ಸಂಖ್ಯೆ 205201231000328ಕ್ಕೆ (ಐಎಫ್‌ಎಸ್‌ಸಿ ಕೋಡ್‌: VIJB0002052) ಕಳುಹಿಸಿಕೊಡ ಬೇಕಾಗಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next