Advertisement

Tourism law ಜಾರಿಗೆ ಬಂದರೆ ಅಕ್ರಮಕ್ಕೆ ಕಡಿವಾಣ: ಸಚಿವ ರೋಹನ್

01:10 PM Jul 01, 2023 | Team Udayavani |

ಪಣಜಿ: ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ವ್ಯವಹಾರಗಳಲ್ಲಿನ ಅವ್ಯವಸ್ಥೆಗೆ ಕಡಿವಾಣ ಹಾಕುವುದು ಅವಶ್ಯಕ. ಇಂತಹ ಅಕ್ರಮಗಳು ಸ್ವಯಂಚಾಲಿತವಾಗಿ ಆದಾಯ ಸೋರಿಕೆಯಾಗುತ್ತವೆ. ಆದ್ದರಿಂದ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು. ಅದಕ್ಕಾಗಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಗುವುದು. ಗೋವಾ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಮಾಹಿತಿ ನೀಡಿದರು.

Advertisement

ಪಣಜಿಯಲ್ಲಿ ಖಾಸಗಿ ಸುದ್ಧಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಭದಲ್ಲಿ ಮಾತನಾಡಿದ ಅವರು ಒಮ್ಮೆ ಪ್ರವಾಸೋದ್ಯಮ ಕಾನೂನು ಜಾರಿಗೆ ಬಂದರೆ  ವಿವಿಧ ಅಕ್ರಮಕ್ಕೆ ಕಡಿವಾಣ ಬೀಳಲಿದೆ ಎಂದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಈ ಕಾಯಿದೆ ಅಡಿಯಲ್ಲಿ ಬರುತ್ತವೆ. ವಿವಿಧ ಕಾನೂನುಗಳ ಮೇಲೆ ಕಾರ್ಯನಿರ್ವಹಿಸುವ ದೆಹಲಿ ಮೂಲದ ಸಂಸ್ಥೆಯಾದ ನಲ್ಸಾರ್ ಈ ಕಾಯ್ದೆಯನ್ನು ರಚಿಸಿದೆ. ಈ ಖಾಯ್ದೆ ತಯಾರಿಕೆ ಅಂತಿಮ ಹಂತದಲ್ಲಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಈ ಖಾಯ್ದೆಯ ಅಡಿಯಲ್ಲಿ ಅಪರಾಧಿಗಳಿಗೆ ದಂಡ ವಿಧಿಸಲು ಕಾನೂನು ಕೂಡ ಸುಲಭವಾಗಲಿದೆ. ಗುಣಮಟ್ಟ ಮತ್ತು ಸಂಖ್ಯೆಗಳ ಸೂತ್ರವನ್ನು ಸಾಧಿಸಲು ಎಲ್ಲಾ ಕ್ಷೇತ್ರಗಳಲ್ಲಿನ ಸ್ಥಳೀಯ ಮಧ್ಯಸ್ಥಗಾರರು ಒಗ್ಗೂಡಬೇಕಾಗಿದೆ.  ಗೋವಾ ರಾಜ್ಯವು ಮೊದಲಿನಂತೆ ಪ್ರವಾಸಿ ತಾಣವಾಗಿ ಉಳಿದಿಲ್ಲ ಎಂದು ನುಡಿದರು.

ಉತ್ತರಾಖಂಡದ ದೇವಸ್ಥಾನಗಳನ್ನು ಉತ್ತರ ಕಾಶಿ ಎಂದು ಕರೆಯುವ ರೀತಿಯಲ್ಲಿಯೇ ಪ್ರವಾಸೋದ್ಯಮ ವಲಯದಲ್ಲಿ ಗೋವಾವನ್ನು ದಕ್ಷಿಣ ಕಾಶಿ ಎಂದು ಕರೆಯಬೇಕು, ಈ ನಿಟ್ಟಿನಲ್ಲಿ ನಾವು ಪ್ರವಾಸೋದ್ಯಮ ಅಭಿವೃದ್ಧಿಯತ್ತ ಪ್ರಯತ್ನಿಸುತ್ತಿದ್ದೇವೆ. ಹೊಸ ಪ್ರವಾಸೋದ್ಯಮ ನೀತಿಯಡಿಯಲ್ಲಿ ರಾಜ್ಯವು ಆಧ್ಯಾತ್ಮಿಕ ಮತ್ತು ಗ್ರಾಮೀಣ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next