Advertisement

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

12:08 AM May 21, 2024 | Team Udayavani |

ಶಿರ್ವ: ಕಟಪಾಡಿ- ಶಿರ್ವ-ಬೆಳ್ಮಣ್‌ ಮುಖ್ಯ ರಸ್ತೆಯ ಪದವು ಜಂಕ್ಷನ್‌ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್‌ಅನ್ನು ಶಿರ್ವ ಠಾಣಾಧಿಕಾರಿ ಸಕ್ತಿವೇಲು ಇ. ರವಿವಾರ ವಶಕ್ಕೆ ಪಡೆದಿದ್ದಾರೆ.

Advertisement

ಶಿರ್ವ ಪೊಲೀಸರು ರವಿವಾರ ಬೆಳಗ್ಗೆ ಪದವು ಜಂಕ್ಷನ್‌ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಬೆಳ್ಮಣ್‌ ಕಡೆಯಿಂದ ಶಿರ್ವ ಕಡೆಗೆ ಬರುತ್ತಿದ್ದ ಟಿಪ್ಪರನ್ನು ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕ ಟಿಪ್ಪರ್‌ನಿಂದ ಇಳಿದು ಓಡಲು ಪ್ರಯತ್ನಿಸಿದ್ದ. ಆತ‌ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಟಿಪ್ಪರ್‌ ಮಾಲಕ ಅಶ್ವಥ್‌ ಸೂಚನೆಯಂತೆ ಟಿಪ್ಪರ್‌ನಲ್ಲಿದ್ದ ಮರಳನ್ನು ದ.ಕ. ಜಿಲ್ಲೆಯ ಅಡ್ಡೂರು ಬಳಿಯ ಗುರುಪುರ ನದಿಯಿಂದ ತನಗೆ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಸೇರಿ 3 ಯುನಿಟ್‌ ಮರಳನ್ನು ಕಳವು ಮಾಡಿ ಟಿಪ್ಪರ್‌ಗೆ ತುಂಬಿಸಿ ಮಾರಾಟ ಮಾಡಲು ಸಾಗಾಟ ನಡೆಸುತ್ತಿರುವುದಾಗಿ ತಿಳಿಸಿದ್ದ.

 

Advertisement

Udayavani is now on Telegram. Click here to join our channel and stay updated with the latest news.

Next