Advertisement

Bantwala: ಅಕ್ರಮ ಮರಳು ಸಾಗಾಟ; ಪ್ರಕರಣ ದಾಖಲು

08:43 PM Jun 04, 2024 | Team Udayavani |

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಮಂಗಳವಾರ ಮುಂಜಾನೆ ಬಂಟ್ವಾಳ ನಗರ ಪೊಲೀಸರು 2 ಲಾರಿಗಳನ್ನು ನಿಲ್ಲಿಸಲು ಹೇಳಿದಾಗ ಚಾಲಕರು ಟಿಪ್ಪರ್‌ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದು, ಘಟನೆಗೆ ಸಂಬಂಧಿಸಿ ಅಕ್ರಮ ಮರಳು ಸಾಗಾಟದ ಪ್ರಕರಣ ದಾಖಲಾಗಿದೆ.

Advertisement

ಬಂಟ್ವಾಳ ನಗರ ಠಾಣೆ ಪಿಎಸ್‌ಐ ರಾಮಕೃಷ್ಣ ಹಾಗೂ ಸಿಬಂದಿ ಎರಡು ಟಿಪ್ಪರ್‌ ಲಾರಿಗಳನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚನೆ ನೀಡಿದ್ದು, ಆದರೆ ಚಾಲಕರು ಲಾರಿಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಓಡಿ ಹೋಗಿದ್ದಾರೆ. ಬಳಿಕ ಲಾರಿಗಳನ್ನು ಪರಿಶೀಲಿಸಲಾಗಿ ಮರಳು ಲೋಡ್‌ ಪತ್ತೆಯಾಗಿದೆ.

ಚಾಲಕರು ಯಾವುದೇ ಪರವಾನಿಗೆಯನ್ನು ಪಡೆಯದೆ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದು, ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next