Advertisement

ಅಕ್ರಮ ಮರಳು ಸಾಗಣೆ: ವ್ಯಕ್ತಿ ಬಂಧನ

11:33 AM Jul 30, 2019 | Team Udayavani |

ಆಲ್ದೂರು: ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವ್ಯಕ್ತಿಯನ್ನು ಆಲದಗುಡ್ಡೆ ಸಮೀಪದ ಹಲಸು ಮನೆ ರಸ್ತೆಯಲ್ಲಿ ಆಲ್ದೂರು ಪೊಲೀಸರು ಬಂಧಿಸಿ ಟಿಪ್ಪರ್‌ ವಶಕ್ಕೆ ಪಡೆದಿದ್ದಾರೆ.

Advertisement

ಭಾನುವಾರ ಆಲದಗುಡ್ಡೆ ಬಳಿಯ ವಳಗೇರಹಳ್ಳಿ ಕಾಲೋನಿ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಟಿಪ್ಪರ್‌ನಲ್ಲಿ ಮರಳು ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಆಲ್ದೂರು ಪಿಎಸ್‌ಐ ರಾಘವೇಂದ್ರ ನೇತೃತ್ವದ ತಂಡ, ಮಂಗಳೂರು ಮೂಲದ ಕರೀಂ ಎಂಬಾತನನ್ನು ಬಂಧಿಸಿ, ಟಿಪ್ಪರ್‌ ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭದಲ್ಲಿ ಸಿಬ್ಬಂದಿ ನಾಗರಾಜು, ದೇವರಾಜು, ಚಾಲಕ ನವೀನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next