Advertisement

ತುಂಗಭದ್ರಾ ನದಿಯ ಒಡಲು ಬಗೆದು ಅಕ್ರಮ ಮರಳು ದಂಧೆ: ಅಧಿಕಾರಿಗಳ ನಿರ್ಲಕ್ಷ್ಯ

09:41 AM Nov 06, 2019 | Suhan S |

ಗಂಗಾವತಿ: ತುಂಗಭದ್ರಾ ನದಿಯ ಒಡಲು ಬಗೆದು ಅಕ್ರಮ ಮರಳು ದಂಧೆಗೆ ತಾಲೂಕಿನ ಗೂಗಿಬಂಡಿ ಗ್ರಾಮಸ್ಥರು ರೋಸಿ ಹೋಗಿದ್ದಾರೆ.

Advertisement

ಕಳೆದ ಹಲವು ತಿಂಗಳಿಂದ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದ್ದರೂ ತಾಲೂಕು ಆಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಗ್ರಾಮದ ಹತ್ತಿರ ಇರುವ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಇಡೀ ರಾತ್ರಿ ಸಂಗ್ರಹಿಸಿ ರಾತ್ರೋರಾತ್ರಿ ಅಕ್ರಮವಾಗಿ ಮರಳನ್ನು ಸಾಗಿಸಲಾಗುತ್ತಿದೆ. ಹಲವು ಭಾರಿ ಗ್ರಾಮಸ್ಥರು ಪೊಲೀಸ್ ಹಾಗು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲ್ಲಿಯ ಮರಳು ಬೆಂಗಳೂರು,ಹುಬ್ಬಳ್ಳಿ ಸೇರಿ ಹಲವು ನಗರಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಕ್ರಮ‌ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next