Advertisement

ಲಕ್ಷಾಂತರ ಮೌಲ್ಯದ ಅಕ್ರಮ ಕೆಂಪು ಮರಳು ವಶ

03:01 PM Jul 09, 2019 | Suhan S |

ಚಿಂಚೋಳಿ: ತಾಲೂಕಿನ ಹಲಕೊಡಾ ಗ್ರಾಮದ ಹತ್ತಿರ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಯಲ್ಲಿನ ಲಕ್ಷಾಂತರ ರೂ. ಬೆಲೆ ಬಾಳುವ ಕೆಂಪು ಮರಳನ್ನು ಹೊಲವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದನ್ನು ತಹಶೀಲ್ದಾರ ಪಂಡಿತ ಬಿರಾದಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

Advertisement

ಹಲಕೋಡ ಗ್ರಾಮದ ನದಿಯಲ್ಲಿನ ಕೆಂಪು ಉಸುಕು ಹೆಚ್ಚಿನ ಬೆಲೆ ಬಾಳುವುದಾಗಿದ್ದು, ಅಪಾರ ಬೇಡಿಕೆಯಿದೆ. ಹೀಗಾಗಿ ಮರಳು ದಂಧೆಕೋರರು ಅನೇಕ ವರ್ಷಗಳಿಂದ ನದಿಯಲ್ಲಿನ ಉಸುಕನ್ನು ಯಾವುದೇ ಪರವಾನಗಿ ಪಡೆಯದೇ ಟಿಪ್ಪರ್‌, ಲಾರಿ, ಟ್ರ್ಯಾಕ್ಟರ್‌, ಟಂಟಂ ಮೂಲಕ ತಾಂಡೂರ, ಚಿಂಚೋಳಿ, ಸೇಡಂ, ಹುಮನಾಬಾದ, ಕಲಬುರಗಿ, ಚಿತ್ತಾಪುರ, ಬೀದರ, ಬಸವಕಲ್ಯಾಣ ಮುಂತಾದ ನಗರ ಪ್ರದೇಶಗಳಿಗೆ ರಾತ್ರಿ-ಹಗಲು ಎನ್ನದೇ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದರು.

ಹಲಕೋಡಾ, ಜಟ್ಟೂರ, ಪೋತಂಗಲ್ ಗ್ರಾಮಗಳ ಹತ್ತಿರ ಕೆಂಪು ಉಸುಕನ್ನು ತೆಗೆಯಲು ಲೀಜ್‌ ಮೇಲೆ ಕರ್ನಾಟಕ ಮೂಲಭೂತ ಸೌಕರ್ಯಗಳ ನಿಗಮ ನಿಯಮಿತಕ್ಕೆ ವಹಿಸಿಕೊಡಲಾಗಿದೆ. ಆದರೆ ಸರಕಾರಕ್ಕೆ ಯಾವುದೇ ರಾಯಲ್ಟಿ ತುಂಬದೇ ಮತ್ತು ಲೀಜ್‌ ಪಡೆದುಕೊಳ್ಳದೇ ಅಕ್ರಮವಾಗಿ ಉಸುಕು ಮಾರಾಟ ಮಾಡಲಾಗುತ್ತಿದೆ ಎಂದು ಅನೇಕ ಸಲ ತಹಶೀಲ್ದಾರ್‌ಗೆ, ಪೊಲೀಸರಿಗೆ ಶಸಿರೋಳಿ ತಾಪಂ ಸದಸ್ಯ ವೆಂಕಟರೆಡ್ಡಿ ಪಾಟೀಲ ಜಟ್ಟೂರ ದೂರು ಸಲ್ಲಿಸಿದ್ದರಿಂದ ಈ ದಾಳಿ ನಡೆಸಲಾಗಿದೆ.

ಹಲಕೋಡಾ, ಪೋತಂಗಲ್, ಜಟ್ಟೂರ ಹತ್ತಿರ ಉಸುಕು ಸಾಗಿಸುವ ಟಿಪ್ಪರ್‌, ಲಾರಿಗಳ ಮೇಲೆ ನಿಗಾ ವಹಿಸಲು ಕಂದಾಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಅಕ್ರಮ ಉಸುಕು ಸಂಗ್ರಹ ಮಾಡಿದ ಮಾಲೀಕರ ವಿರುದ್ಧ ಸುಲೇಪೇಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ನಿರೀಕ್ಷಕ ಸುಭಾಷ ಸುಲೇಪೇಟ, ಜೆಇ ಗಿರಿರಾಜ ಸಜ್ಜನಶೆಟ್ಟಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next