Advertisement

Hunsur News:ಅಕ್ರಮ ಕಸಾಯಿಖಾನೆಗೆ ಸಾಗಿಸುತ್ತಿದ್ದ 7 ಕರುಗಳ ರಕ್ಷಣೆ, ವಾಹನ ವಶ, ಚಾಲಕ ಪರಾರಿ

12:14 PM Apr 05, 2023 | Team Udayavani |

ಹುಣಸೂರು: ಟಾಟಾ ಏಸ್ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಏಳು ಕರುಗಳನ್ನು ರಕ್ಷಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.

Advertisement

ನಗರದ ಪೋಲಿಸ್ ಇನ್ಸ್‌ಪೆಕ್ಟರ್‌ ದೇವೆಂದ್ರ ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ವೇಳೆ ಟಾಟಾ ಎಸ್ ಗೂಡ್ಸ್ ವಾಹನದಲ್ಲಿ ಕರುಗಳನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ರತ್ನಪುರಿ ರಸ್ತೆಯ ಸಲೀಂ ಪ್ಯಾಲೆಸ್ ಬಳಿ ಗೂಡ್ಸ್ ವಾಹನವನ್ನು ನಿಲ್ಲಿಸಲು ಸೂಚಿಸುತ್ತಿದ್ದಂತೆ ಚಾಲಕ ವಾಹನವನ್ನು ನಿಲ್ಲಿಸಿ ಕತ್ತಲಿನಲ್ಲೇ ಪರಾರಿಯಾಗಿದ್ದಾನೆ.

ವಾಹನದ ಟಾರ್ಪಲ್ ತೆಗೆದು ನೋಡಿದ ವೇಳೆ ಏಳು ಕರುಗಳು ಪತ್ತೆಯಾಗಿದ್ದು,  ವಾಹನ ಮತ್ತು ಕರುಗಳನ್ನು ಪೋಲಿಸರು ವಶಕ್ಕೆ ಪಡೆದು ಕರುಗಳನ್ನು ಮೈಸೂರಿನ ಪಿಂಜರಾ ಪೋಲ್‌ಗೆ ಕಳುಹಿಸಿ ಕೊಡಲಾಗಿದೆ.

ವಾಹನ ಮಾಲಿಕ ಪ್ರಕಾಶ್ ಮತ್ತು ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next