Advertisement

ಉಳ್ತೂರು: ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ

09:40 AM Nov 11, 2019 | Mithun PG |

ತೆಕ್ಕಟ್ಟೆ: ತಡರಾತ್ರಿ ಕೊಟ್ಟಿಗೆಗೆ  ನುಗ್ಗಿ ದನವೊಂದನ್ನು ಕದ್ದೊಯ್ದ ಘಟನೆ ಉಳ್ತೂರುನಲ್ಲಿ ನಡೆದಿದೆ. ಉಳ್ತೂರು ಹೊಯ್ಗೆ ಸಾಲು  ಪ್ರತಾಪ್ ಶೆಟ್ಟಿಯವರ ಮನೆಯಲ್ಲಿದ್ದ ಗೋವನ್ನು ಕಳ್ಳತನ ಮಾಡಲಾಗಿದೆ ಎಂದು ವರದಿಯಾಗಿದೆ.

Advertisement

ಸ್ಥಳೀಯ  ದಲ್ಲಾಳಿಯೊಬ್ಬ  ಈ ಹಿಂದೆ ದನವನ್ನು ಸಾಕಲು ಕೇಳಲು ಬಂದಾಗ ಪ್ರತಾಪ್ ಶೆಟ್ಟಿ ಗೋವನ್ನು ಕೊಡಲು ನಿರಾಕರಿಸುತ್ತಾರೆ. ಅದಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ವ್ಯಕ್ತಿ ಬಂದು ಕೂಡ ದನವನ್ನು ಕೇಳಿದ್ದರು ಎನ್ನಲಾಗಿದೆ. ಅದಾಗಿ ಮಾರನೇ ದಿನವೇ ಕೊಟ್ಟಿಗೆಯಲ್ಲಿದ್ದ ದನವೊಂದು ಕಾಣೆಯಾಗಿದ್ದು  ಮನೆಯವರು ದಳ್ಳಾಳಿಯ ಮೇಲೆ ಅನುಮಾನ ವ್ಯಕ್ತಪಡಿಸಿ,  ಕೋಟ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈತನ ವಿರುದ್ದ 2 ವರ್ಷಗಳ ಹಿಂದೆ ಕೂಡ ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸುಮಾರು 3 ತಿಂಗಳಲ್ಲಿ 20ಕ್ಕೂ ಹೆಚ್ಚು ಗೋವುಗಳನ್ನು ಮತ್ತು ದೇವಾಲಯ ಸಮೀಪ ಮಲಗುವ ಬಸವಗಳನ್ನು ಕದ್ದೊಯ್ಯಲಾಗಿದೆ ಎನ್ನಲಾಗಿದೆ.  ಅಕ್ರಮ ಗೋ ಸಾಗಾಟ ಹಾಗೂ ಗೋ ಕಳ್ಳತನ ಈ ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿದೆ, ಇದರ ಬಗ್ಗೆ ಪೊಲೀಸ್ ಇಲಾಖೆ ಕೂಡಲೇ ಕ್ರಮ ಜರುಗಿಸಬೇಕೆಂದು  ಸಾರ್ವಜನಿಕರು  ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next