Advertisement

ಬೆಳ್ತಂಗಡಿ: ಸಿಬಂದಿ ರಕ್ಷಣಾ ಕಾರ್ಯಕ್ಕೆ ಐಜಿಪಿ ಶ್ಲಾಘನೆ

11:57 PM Sep 07, 2019 | sudhir |

ಬೆಳ್ತಂಗಡಿ: ಸಮಾಜದಲ್ಲಿನ ಹಲವಾರು ಸವಾಲುಗಳ ನಡುವೆಯೂ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಸಂದರ್ಭ ಪ್ರಾಣದ ಹಂಗು ತೊರೆದು ಹಲವಾರು ಮಂದಿಯ ಪ್ರಾಣ ರಕ್ಷಿಸಿದ ಪೊಲೀಸ್‌ ಇಲಾಖೆ ಸಹಿತ ಇತರರಕ್ಷಣಾ ಪಡೆಗಳ ಸಿಬಂದಿಯ ಸೇವೆ ಅಭಿನಂದನೀಯ ಎಂದು ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಹೇಳಿದರು.

Advertisement

ಅಂಬೇಡ್ಕರ್‌ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶನಿವಾರ ಬೆಳ್ತಂಗಡಿ ತಾಲೂಕಿನ ಹಲವೆಡೆ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ನಾಗರಿಕರ ಪ್ರಾಣ ರಕ್ಷಣೆಗೆ ನೆರವಾದ ತಾ|ನ ಪೊಲೀಸ್‌, ಎಎನ್‌ಎಫ್‌ ಹಾಗೂ ಅಗ್ನಿಶಾಮಕ ದಳದ ಸಿಬಂದಿಯನ್ನು ಗೌರವಿಸಿ ಅವರು ಮಾತನಾಡಿದರು.

ಬೆಳ್ತಂಗಡಿ, ಧರ್ಮಸ್ಥಳ ಠಾಣಾಧಿಕಾರಿ ಗಳಾದ ರವಿ, ಅವಿನಾಶ್‌ ಗೌಡ, ಸಿಬಂದಿ ಹರೀಶ್‌ ನಾಯ್ಕ, ದುರ್ಗಾದಾಸ್‌, ಸವಿತಾ, ಅಶೋಕ, ವೆಂಕಟೇಶ, ರಾಜೇಶ್‌, ಮುತ್ಯಪ್ಪ, ದೇವಿಪ್ರಸಾದ್‌, ರವೀಂದ್ರ, ರಾಹುಲ್ ರಾವ್‌, ಕೃಷ್ಣಪ್ಪ, ಚೌಡಪ್ಪ, ಹರೀಶ್‌ ಕುಮಾರ್‌, ಎಎನ್‌ಎಫ್‌ನ ರಾಜೇಶ್‌, ರಾಮಣ್ಣ ಗೌಡ, ಯತೀಂದ್ರ, ರಘು, ಮುಖ್ಯ ಫೈರ್‌ಮನ್‌ ಕೃಷ್ಣ ನಾಯಕ್‌, ಚಾಲಕ ಶಂಕರ, ಫೈರ್‌ಮನ್‌ ಉಸ್ಮಾನ್‌ ಅವರನ್ನು ಐಜಿಪಿ ಗೌರವಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್‌, ಹೆಚ್ಚುವರಿ ವರಿಷ್ಠಾಧಿಕಾರಿ ವಿಕ್ರಮ್‌ ಆಮ್ಟೆ, ಬಂಟ್ವಾಳ ಎಎಸ್‌ಪಿ ಸೈದುಲು ಅಡಾವತ್‌, ಡಿವೈಎಸ್‌ಪಿ ನಟರಾಜ್‌ ಉಪಸ್ಥಿತರಿದ್ದರು. ಬೆಳ್ತಂಗಡಿ ಠಾಣಾ ವೃತ್ತ ನಿರೀಕ್ಷಕ ಸಂದೇಶ್‌ ಸ್ವಾಗತಿಸಿ, ವಂದಿಸಿ ದರು. ಮುಖ್ಯ ಪೇದೆ ವೆಂಕಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next