Advertisement

JEE-Advanced ಅರ್ಹತೆ ಪಡೆಯದ ಐಐಟಿ ಆಕಾಂಕ್ಷಿ ಆತ್ಮಹತ್ಯೆಗೆ ಶರಣು

12:26 PM Apr 29, 2017 | Team Udayavani |

ಕೋಟ, ರಾಜಸ್ಥಾನ : ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಗೆ ಅರ್ಹತೆ ಪಡೆಯದ ಕಾರಣಕ್ಕೆ ಹತಾಶನಾದ ಐಐಟಿ ಆಕಾಂಕ್ಷಿ, 19ರ ಹರೆಯದ, ಪಶ್ಚಿಮ ಬಂಗಾಲದ ನವಾಬ್‌ಗಂಜ್‌ನ ನಿವಾಸಿಯಾಗಿರುವ ಅರಿಜಿತ್‌ ಎಂಬ ವಿದ್ಯಾರ್ಥಿ ತನ್ನ ಹಾಸ್ಟೆಲ್‌ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ. 

Advertisement

ಅರಿಜಿತ್‌ ಇಲ್ಲಿನ ಪ್ರಮುಖ ಕೋಚಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಐಐಟಿ ಮೇನ್ಸ್‌ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ; ಆದರೆ ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಗೆ ಅರ್ಹತೆ ಗಳಿಸುವಲ್ಲಿ ತಾನು ವಿಫ‌ಲನಾದ ಹತಾಶೆಯಲ್ಲಿ ಆತ ನಿನ್ನೆ ಶುಕ್ರವಾರ ಸಂಜೆ  ಇಲ್ಲಿನ ತನ್ನ ಹಾಸ್ಟೆಲ್‌ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ಹೇಳಿದ್ದಾರೆ. 

ಅರಿಜಿತ್‌ ಯಾವುದೇ ಡೆತ್‌ ನೋಟ್‌ ಬರೆದಿಟ್ಟಿಲ್ಲ; ಆದರೆ ಆತ ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಗೆ ಅರ್ಹತೆ ಗಳಿಸುವಲ್ಲಿ ವಿಫ‌ಲನಾದುದಕ್ಕೆ ತೀವ್ರ ಹತಾಶೆಗೆ ಗುರಿಯಾಗಿ ಖನ್ನತೆಯನ್ನು ಅನುಭವಿಸುತ್ತಿದ್ದ ಎಂದು ಆತನ ಸಹಪಾಠಿಗಳು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next