Advertisement

ಕಾರ್ಮಿಕ ವರ್ಗ ಸಂತುಷ್ಟವಾದರೆ ಸರ್ವ ಕಾರ್ಯ ಯಶಸ್ಸು: ಕಾಮತ್‌

09:56 PM Apr 15, 2020 | Sriram |

ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 1,000 ಕಾರ್ಮಿಕರು ಹಾಗೂ ಸಿಬಂದಿಗೆ ಪಾಲಿಕೆ ವತಿಯಿಂದ ಸಿವಿಲ್‌ ಎಂಜಿನಿಯರ್ ಅಸೋಸಿಯೇಶನ್‌ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಆಹಾರ ಕಿಟ್‌ಗಳನ್ನು ಬುಧವಾರ ವಿತರಿಸಲಾಯಿತು.

Advertisement

ಪಾಲಿಕೆಯ 240 ಪೌರ ಕಾರ್ಮಿಕರು, 180 ನೀರು ಸರಬರಾಜು ವಿಭಾಗದ ಕಾರ್ಮಿಕರು, ಒಳಚರಂಡಿ ಕಾಮಗಾರಿ ನಡೆಸುವ 150 ಕಾರ್ಮಿಕರು, 85 ಎಂಪಿಎಬ್ಲೂ$Â ಕಾರ್ಮಿಕರು, ಕಾರು ಚಾಲಕರು, ಆಶಾ, ಅಂಗನವಾಡಿ ಕಾರ್ಯ ಕರ್ತೆಯರು, ವೆನಾÉಕ್‌ನಲ್ಲಿ ಕಾರ್ಮಿಕರು, ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕಾರ್ಮಿಕರು ಸಹಿತ 1,000ಕ್ಕೂ ಅಧಿಕ ಜನರಿಗೆ ಕಿಟ್‌ ವಿತರಿಸಲಾಯಿತು.

ಕಿಟ್‌ ವಿತರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್‌ ಅವರು, ಪಾಲಿಕೆಯ ಕಾರ್ಮಿಕ ವರ್ಗ ಸಂತುಷ್ಟವಾಗಿದ್ದರೆ ನಗರದ ಎಲ್ಲ ಕೆಲಸ ಕಾರ್ಯಗಳು ಸುಗಮ ವಾಗುತ್ತವೆ. ಈ ನಿಟ್ಟಿನಲ್ಲಿ ಮೇಯರ್‌ ಮುತುವರ್ಜಿಯಿಂದ ಕಿಟ್‌ಗಳನ್ನು ವಿತರಿಸಿರುವುದು ಉತ್ತಮ ಕಾರ್ಯ ಎಂದರು. ಮೇಯರ್‌ ದಿವಾಕರ್‌ ಪಾಂಡೇಶ್ವರ, ಉಪಮೇಯರ್‌ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ವಿಪಕ್ಷ ನಾಯಕ ಅಬ್ದುಲ್‌ ರವೂಫ್‌, ಮಾಜಿ ಮೇಯರ್‌ ಎಂ. ಶಶಿಧರ ಹೆಗ್ಡೆ, ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಸಹಾಯಕ ಆಯುಕ್ತ ಸಂತೋಷ್‌, ಪ್ರಮುಖರಾದ ಸುಧೀಂದ್ರ ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next