Advertisement

ಚಾಮರಾಜಪೇಟೇಲಿ ಜೆಡಿಎಸ್ ಗೆದ್ದರೆ ತಲೆಕತ್ತರಿಸಿ ಇಡ್ತೇನೆ; ಜಮೀರ್

01:25 PM Jul 22, 2017 | Team Udayavani |

ಬೆಂಗಳೂರು:ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿ ಮಾಧ್ಯಮದವರ ಕೈಯಲ್ಲಿ ಇಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

Advertisement

ಶನಿವಾರ ಸುದ್ದಿಗಾರರು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ನಾನು ಯಾವತ್ತೂ ದೇವೇಗೌಡರನ್ನು ಬೈದಿಲ್ಲ. ನನ್ನ ಗೆಲುವಿಗಾಗಿ ಅವರು ಏನೂ ಮಾಡಿಲ್ಲ ಅಂತ ಹೇಳಿಲ್ಲ ಎಂದರು.

ಚಾಮರಾಜಪೇಟೆ ಜನ ನನ್ನ ಇಷ್ಟಪಡ್ತಾರೆ, ದೇವೇಗೌಡರನ್ನಲ್ಲ. ನಾನು ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಚಾಮರಾಜಪೇಟೆಯಲ್ಲಿ ಜನ ನನ್ನ ಮುಖ ನೋಡಿ ಜೆಡಿಎಸ್ ಗೆ ಮತಹಾಕುತ್ತಾರೆ. ಈ ಕ್ಷೇತ್ರದ ಜನ ನನ್ನ ಮನೆಮಗ ಎಂದು ಭಾವಿಸಿದ್ದಾರೆ ಎಂದು ಹೇಳಿದರು.

ಚುನಾವಣೆ ವೇಳೆ ಮನೆ, ಮನೆಗೆ ಹೋಗಿ ಜೆಡಿಎಸ್ ಗೆ ಮತ ಕೊಡಿ ಎಂದು ಕೇಳಿಕೊಂಡಿದ್ದೆ. ಈ ದೇಶದ ಸ್ಥಿತಿ ನೋಡಿದರೆ ಭಯವಾಗುತ್ತದೆ ನನಗೆ. ಈ ದೇಶದಲ್ಲಿ ಮತ್ತೊಮ್ಮೆ ಸಮಾನವಾಗಿ ಬಾಳುವಂತೆ ಮಾಡಿ. ಅದಕ್ಕಾಗಿ ಜೆಡಿಎಸ್ ಪಕ್ಷವನ್ನು ಉಳಿಸಬೇಕಾಗಿದೆ. ಈ ಬಗ್ಗೆ ಹಿಂದೂ, ಮುಸ್ಲಿಂ ಅಣ್ಣ ತಮ್ಮಂದಿರು ಅರ್ಥ ಮಾಡಿಕೊಳ್ಳಬೇಕು ಎಂದು ದೇವೇಗೌಡರು ಇತ್ತೀಚೆಗಷ್ಟೇ ಚಾಮರಾಜಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮನವಿ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next