Advertisement

ಕಾಲ್ ಬರುತ್ತಿಲ್ಲವಾದರೆ ಟೆಲಿಫೋನ್ ಕಂಪೆನಿಯನ್ನು ವಿಚಾರಿಸಿ: ಡಿಕೆಶಿಗೆ ಬೊಮ್ಮಾಯಿ ತಿರುಗೇಟು

08:20 PM Aug 21, 2020 | Mithun PG |

ಬೆಂಗಳೂರು: ನಮ್ಮದು ಒಂದು ಜವಾಬ್ದಾರಿಯುತ ಸರ್ಕಾರವಾಗಿದ್ದು‌ ಟೆಲಿಫೋನ್ ಕದ್ದಾಲಿಕೆ ಮಾಡುವ ಕೆಳಮಟ್ಟಕ್ಕೆ ಹೋಗುವುದಿಲ್ಲ ಅದು ನಮಗೆ ಅವಶ್ಯಕತೆಯು ಇಲ್ಲ. ಡಿ.ಕೆ ಶಿವಕುಮಾರ್ ಅವರ ಟೆಲಿಫೋನ್ ಕದ್ದಾಲಿಕೆಯ ಪ್ರಶ್ನೆಯೇ ಇಲ್ಲ, ಅವರ ನಾಯಕರು ಅವರಿಗೆ ಕಾಲ್ ಮಾಡಿದಾಗ ಮಾತನಾಡಲು ಸಾಧ್ಯವಾಗಿಲ್ಲ ಅಂದರೆ ಟೆಲಿಫೋನ್ ಕಂಪನಿಯನ್ನು ವಿಚಾರಿಸಬೇಕು ಎಂದು  ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿದ ಬೊಮ್ಮಾಯಿ, ಟೆಲಿಫೋನ್ ಟ್ಯಾಪಿಂಗ್ ಅಂತ ಆರೋಪ ಮಾಡುವುದು ಸರಿಯಲ್ಲ. ಈಗಾಗಲೇ ಅವರ ಸರ್ಕಾರ ಟೆಲಿಫೋನ್ ಟ್ಯಾಪಿಂಗ್ ಮಾಡಿದ್ದನ್ನು ಸಿಬಿಐ ವಿಚಾರಣೆ ಮಾಡುತ್ತಿದೆ. ಟೆಲಿಫೋನ್ ಟ್ಯಾಪಿಂಗ್ ಅನುಭವ ಅವರ ಸರ್ಕಾರಕ್ಕೆ ಇದೆ. ನಮ್ಮ ಸರಕಾರವು ಡಿ.ಕೆ ಶಿವಕುಮಾರ್ ಅವರ ಚಟುವಟಿಕೆಗಳ ಬಗ್ಗೆ ತೆಲೆಕೆಡಿಸಿಕೊಂಡಿಲ್ಲ ಹಾಗೂ ಇದು ನಮಗೆ ಅವಶ್ಯಕತೆಯು ಇಲ್ಲ ಎಂದು ತಿಳಿಸಿದ್ದಾರೆ.

ಅವರು ತನಿಖೆಯಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿರುವದಾಗಿ ಮಾಡಿರುವ ಆರೋಪವು ನಿರಾಧಾರ ಹಾಗೂ ಶುದ್ಧಸುಳ್ಳು. ಪೋಲಿಸರು ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡುತ್ತಿದ್ದಾರೆ.ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಪೋಲಿಸರ ನೈತಿಕ ಬಲವನ್ನು ಕುಗ್ಗಿಸುವ ಪ್ರಯತ್ನ ಹಾಗೂ ಗಲಭೆಕೋರರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದು ಅದು ಎಂದಿಗೂ ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next