Advertisement

ಉಗ್ರ ಚಟುವಟಿಕೆ ನಿಲ್ಲಿಸಿದರೆ ಮಾತು

12:55 AM Jun 09, 2019 | Sriram |

ವಾಷಿಂಗ್ಟನ್‌: ಭಾರತದಲ್ಲಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೇರುತ್ತಿದ್ದಂತೆಯೇ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಪತ್ರ ಬರೆದು ಮಾತುಕತೆಗೆ ಆಹ್ವಾನಿಸಿ ದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ, ಉಗ್ರ ಚಟುವಟಿಕೆಯನ್ನು ಪಾಕಿಸ್ಥಾನ ನಿಲ್ಲಿಸುವವರೆಗೂ ಮಾತುಕತೆಯಿಲ್ಲ ಎಂಬ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

Advertisement

ಶುಕ್ರವಾರ ಎರಡನೇ ಬಾರಿಗೆ ಪತ್ರ ಬರೆದಿರುವ ಇಮ್ರಾನ್‌, ಕಾಶ್ಮೀರ ವಿಷಯ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ಮಾತನಾಡಲು ಬಯಸಿದ್ದೇವೆ. ಉಭಯ ದೇಶಗಳ ಸಮಸ್ಯೆಯನ್ನು ಬಗೆಹರಿಸುವುದು ಮಾತುಕತೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಆದರೆ ಭಾರತ ಇದನ್ನು ತಿರಸ್ಕರಿಸಿದೆ. ಅಷ್ಟೇ ಅಲ್ಲ, ಜೂನ್‌ 13-14 ರಂದು ಕಿರ್ಗಿಸ್ಥಾನದಲ್ಲಿ ನಡೆಯಲಿರುವ ಎಸ್‌ಸಿಒ ಸಮ್ಮೇಳನದಲ್ಲಿ ಇಬ್ಬರೂ ನಾಯಕರು ಭೇಟಿ ಮಾಡುವುದಿಲ್ಲ ಎಂದೂ ಭಾರತದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಅಮೆರಿಕ ಕೂಡ, ಪಾಕಿಸ್ಥಾನದಲ್ಲಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next