Advertisement

ಪ್ರತಾಪಸಿಂಹ ಕ್ಷಮೆ ಕೇಳದಿದ್ದರೆ ಯಡ್ರಾಮಿ ಬಂದ್‌

12:15 PM Nov 23, 2021 | Team Udayavani |

ಯಡ್ರಾಮಿ: ಚಿತ್ತಾಪುರ ಶಾಸಕ ಹಾಗೂ ಕಾಂಗ್ರೆಸ್‌ ಪಕ್ಷದ ವಕ್ತಾರ ಪ್ರಿಯಾಂಕ್‌ ಖರ್ಗೆ ಅವರಿಗೆ ಸಂಸದ ಪ್ರತಾಪಸಿಂಹ ಅವಹೇಳನಕಾರಿ ಮಾತನಾಡಿರುವುದನ್ನು ಖಂಡಿಸಿ ನ.25ರಂದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಯಡ್ರಾಮಿ ಬ್ಲಾಕ್‌ ಕಾಂಗ್ರೆಸ್‌ ಮುಖಂಡರು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಚಂದ್ರಶೇಖರ ಪುರಾಣಿಕ ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಖರ್ಗೆ ಅವರ ಬಗ್ಗೆ ಮಾತನಾಡಿರುವ ಸಂಸದ ಪ್ರತಾಪ ಸಿಂಹ ಅವರು ಕೂಡಲೇ ಹೇಳಿಕೆ ವಾಪಸ್‌ ಪಡೆದು ಕ್ಷಮೆಯಾಚಿಸುವಂತೆ ಒತ್ತಾಯಿಸಿ, ಯಡ್ರಾಮಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನ.25ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹೇಳಿಕೆ ಹಿಂಪಡೆದು ಕ್ಷಮೆಯಾಚಿಸದಿದ್ದರೆ ಯಡ್ರಾಮಿ ಬಂದ್‌ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಮುಖಂಡರಾದ ಬಸಲಿಂಗಪ್ಪ ಸಾಹು ತಾಳಿಕೋಟಿ, ಶೇಖಫರೀದ ಮಳ್ಳಿಕರ್‌, ಇಬ್ರಾಹೀಮಸಾಬ ಉಸ್ತಾದ, ನಾಗಣ್ಣ ಹಾಗರಗುಂಡಗಿ, ಮಲ್ಲಿಕಾರ್ಜುನ ಹಲಕರ್ಟಿ, ಕೆ.ವಿರೇಶಗೌಡ, ಹಯ್ನಾಳಪ್ಪ ಗಂಗಾಕರ, ಬ್ದುಲ್‌ರಜಾಕ್‌ ಮನಿಯಾರ, ಶಿವಲಿಂಗ ಸಾಹು ಸುಂಕದ, ಬಸವರಾಜ ಹೂಗಾರ, ದಯಾನಂದ ಹಿರೇಮಠ, ಸುರೇಶ ಡಂಬಳ, ಅಮೀನ ಪಟೆಲ ಚಿಂಚೋಳಿ, ವಿಶ್ವನಾತ ಪಾಟೀಲ, ಅಫ್ರೋಜ್‌ ಅತ್ನೂರ, ಅಜ್ಮೀರ ಪಟೇಲ ಚಿಂಚೋಳಿ, ಬಸವರಾಜ ಪವಾರ, ಗುರಣ್ಣ ಕಾಚಾಪೂರ, ವಿಶ್ವನಾಥ ಪಾಟೀಲ, ಯಂಕಯ್ಯ ಗುತ್ತೆದಾರ, ಮರೆಪ್ಪ ಗಂಗಾಕರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next