Advertisement
ಶನಿವಾರ, ಪಿ.ಜೆ ಬಡಾವಣೆಯ ಎಸ್ .ಎ.ಜೆ.ಬಿ. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ (ಶಿವಮೊಗ್ಗ, ಮಂಗಳೂರು), ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಸ್ವತ್ಛ ಭಾರತ (ನಗರ) ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಸ್ವತ್ಛ ಭಾರತ ಪರಿಕಲ್ಪನೆ ಬಗ್ಗೆ ಕನಸು ಕಂಡವರು. ಅದೇ ರೀತಿ ಕೇಂದ್ರ ಸರ್ಕಾರ ಸ್ವತ್ಛತೆ ಕುರಿತು ಜನರಿಗೆ ಜಾಗೃತಿ ಮೂಡಿಸಲು ಸ್ವತ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪ್ರೋತ್ಸಾಹಿಸುತ್ತಿದೆ. ಆದರೆ ಈ ಅಭಿಯಾನ ಯಶಸ್ವಿಯಾಗಲು ಮೊದಲು ದೇಶ ಪ್ಲಾಸ್ಟಿಕ್ ಮುಕ್ತ ಆಗಬೇಕಿದೆ ಎಂದರು.
ಸಮಾಜ ಸೇವಕ ಟಿ.ಎಸ್. ಮಹಾದೇವಸ್ವಾಮಿ ಮಾತನಾಡಿ, ಪ್ಲಾಸ್ಟಿಕ್ ನಿರ್ಮೂಲನೆ ಸರ್ಕಾರದಿಂದಲೇ ಸಾಧ್ಯವಿಲ್ಲ. ವಿದ್ಯಾವಂತರಾದ ನಾವೇ ಅವಿದ್ಯಾವಂತರಂತೆ ನಡೆದುಕೊಂಡರೇ ಹೇಗೆ? ಮೊದಲು ವಿದ್ಯಾವಂತರು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಬಿಡಬೇಕು. ಪರಿಸರಕ್ಕೆ ಪೂರಕವಾದ ಬ್ಯಾಗ್ಗಳನ್ನು ಬಳಕೆ ಮಾಡಿ ಇತರರಿಗೂ ಪ್ರೇರಣೆ ಆಗಬೇಕು ಎಂದು ಹೇಳಿದರು.
Related Articles
ಎಂದು ಸಲಹೆ ನೀಡಿದರು.ಈ ರೀತಿ ತಯಾರಿಸಿದ ಗೊಬ್ಬರವನ್ನು ಮನೆ ಅಂಗಳದ ಗಿಡ-ಮರಗಳಿಗೆ, ತಾರಸಿ ತೋಟಕ್ಕೆ ನೀಡಿದರೆ ಭೂಮಿಯು ಸಮೃದ್ಧವಾಗುತ್ತದೆ. ಜೊತೆಗೆ ಹಸಿರೀಕರಣದಿಂದ ಶುದ್ಧ ಗಾಳಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
Advertisement
ಕ್ಷೇತ್ರ ಜನಸಂಪರ್ಕ ಪ್ರಚಾರಾಧಿಕಾರಿ ಜಿ. ತುಕರಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಉಪ ಆಯುಕ್ತರವೀಂದ್ರ ಬಿ. ಮಲ್ಲಾಪುರ, ಕಾಲೇಜು ಪ್ರಾಂಶುಪಾಲ ಎಸ್. ಪ್ರದೀಪ್ಕುಮಾರ್ ಉಪಸ್ಥಿತರಿದ್ದರು.