Advertisement

ಇಸ್ರೇಲ್ ಗೆ ಹೋದಾಗಲೇ ಸಾಯಬೇಕಿತ್ತು..ಆದರೆ ಬದುಕಿ ಬಂದೆ; ಸಿಎಂ HDK

04:40 PM Oct 26, 2018 | Team Udayavani |

ಮಂಡ್ಯ:ನಾನು ಯಾವಾಗ ಸಾಯುತ್ತೇನೋ ಗೊತ್ತಿಲ್ಲ. ಇಸ್ರೇಲ್ ಗೆ ಹೋಗಿದ್ದಾಗಲೇ ಸಾಯಬೇಕಿತ್ತು. ಆದರೆ ಬದುಕಿ ಬಂದಿದ್ದೇನೆ. ನಾನು ಎಷ್ಟು ದಿನ ಬದುಕುತ್ತೇನೆ ಎನ್ನುವುದು ಮುಖ್ಯವಲ್ಲ…ಇದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಳವಳ್ಳಿಯಲ್ಲಿ ಹೇಳಿದ ಮಾತು.

Advertisement

ಶುಕ್ರವಾರ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಇಸ್ರೇಲ್ ಗೆ ಹೋಗಿದ್ದಾಗಲೇ ಸಾಯಬೇಕಿತ್ತು. ಆದರೆ ನಾನು ಬದುಕಿ ಬಂದಿರುವುದೇ ಹೆಚ್ಚು. ನಾನು ಬದುಕಿ ಬಂದಿರುವುದೇ ನಿಮ್ಮಂತಹವರ ಸೇವೆ ಮಾಡಲಿಕ್ಕೆ ಎಂದರು.

ನಾವು ಎಷ್ಟು ದಿನ ಬದುಕುತ್ತೇವೆ ಎಂಬುದು ಮುಖ್ಯವಲ್ಲ. ನಾನೇನು ಹಣ ಲೂಟಿ ಮಾಡಿ, ಆಸ್ತಿ ಮಾಡಬೇಕೆಂದು ಬಂದಿಲ್ಲ. ದೇವರು ಕೊಟ್ಟ ಅಧಿಕಾರವನ್ನು ಒಳ್ಳೇ ರೀತಿಯಲ್ಲಿ ಉಪಯೋಗಿಸಿ ಜನರಿಗೆ ಉಪಕಾರವಾಗುವಂತೆ ಮಾಡುವುದೇ ನನ್ನ ಮುಖ್ಯ ಉದ್ದೇಶ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next