Advertisement

Aadhaar: ಆಧಾರ್‌ ಸಲ್ಲಿಸದಿದ್ದರೆ ಸಣ್ಣ ಉಳಿತಾಯ ಖಾತೆ ಸ್ತಂಭನ!

11:58 PM Sep 15, 2023 | Team Udayavani |

ಹೊಸದಿಲ್ಲಿ: ನೀವು ಪಿಪಿಎಫ್(ಸಾರ್ವಜನಿಕ ಭವಿಷ್ಯ ನಿಧಿ), ಎನ್‌ಎಸ್‌ಸಿ(ರಾಷ್ಟ್ರೀಯ ಉಳಿತಾಯ ಪತ್ರ), ಎಸ್‌ಸಿ­ಎಸ್‌ಎಸ್‌(ಹಿರಿಯ ನಾಗರಿಕರ ಉಳಿತಾಯ ಯೋಜನೆ) ಅಥವಾ ಅಂಚೆ ಕಚೇರಿಯಲ್ಲಿನ ಇತರೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದ್ದೀರಾ?

Advertisement

ಹಾಗಿದ್ದರೆ ಇದೇ ತಿಂಗಳ 30­ರೊಳಗಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೆ ಹೋಗಿ ನಿಮ್ಮ ಆಧಾರ್‌ ಸಂಖ್ಯೆಯ ವಿವರಗಳನ್ನು ಸಲ್ಲಿಸಿ. ಇಲ್ಲದಿದ್ದರೆ, ಆಧಾರ್‌ ಸಂಖ್ಯೆ ಸಲ್ಲಿಕೆಯಾಗು­ವವರೆಗೂ ನಿಮ್ಮ ಸಣ್ಣ ಉಳಿತಾಯ ಖಾತೆಯನ್ನು ಸ್ತಂಭನಗೊಳಿಸಲಾಗುತ್ತದೆ. ಕೇಂದ್ರ ಹಣಕಾಸು ಸಚಿವಾಲಯವು ಪಿಪಿಎಫ್, ಎನ್‌ಎಸ್‌ಸಿ ಸೇರಿದಂತೆ ಎಲ್ಲ ಸಣ್ಣ ಉಳಿತಾಯ ಯೋಜನೆ­ಗಳಿಗೂ ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯನ್ನು ಕಡ್ಡಾಯಗೊಳಿಸಿ 2023ರ ಮಾ.31ರಂದೇ ಅಧಿಸೂಚನೆ ಹೊರಡಿಸಿದೆ.

ಖಾತೆ ಸ್ತಂಭನಗೊಂಡರೆ ಏನಾಗುತ್ತದೆ?

ನಿಮ್ಮ ಬ್ಯಾಂಕ್‌ ಖಾತೆಗೆ ಬಡ್ಡಿ ದರ ಜಮೆ ಆಗಲ್ಲ
ಪಿಪಿಎಫ್ ಅಥವಾ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಠೇವಣಿಯಿಡಲು ಸಾಧ್ಯವಾಗುವುದಿಲ್ಲ
ಮೆಚೂರಿಟಿ ಅವಧಿ ಮುಗಿದರೂ ಖಾತೆಗೆ ಹಣ ಜಮೆಯಾಗುವುದಿಲ್ಲ

 

Advertisement
Advertisement

Udayavani is now on Telegram. Click here to join our channel and stay updated with the latest news.

Next