Advertisement

ನ್ಯಾಯಾಲಯಗಳಲ್ಲಿ 50 ಪ್ರಕರಣ ಇತ್ಯರ್ಥವಾದಾಗ ಇನ್ನೊಂದು 100 ಪ್ರಕರಣ ಹುಟ್ಟುತ್ತೆ!

09:48 PM Aug 20, 2022 | Team Udayavani |

ನವದೆಹಲಿ: ದೇಶದ ನ್ಯಾಯಾಲಯಗಳಲ್ಲಿ ಬಾಕಿಯುಳಿದಿರುವ ಪ್ರಕರಣಗಳ ಸಂಖ್ಯೆ 5 ಕೋಟಿ ಸಮೀಪಿಸಿದೆ. ಇದಕ್ಕೆ ಕಾರಣವನ್ನು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಸ್ಪಷ್ಟಪಡಿಸಿದ್ದಾರೆ.

Advertisement

ಒಬ್ಬ ನ್ಯಾಯಾಧೀಶ 50 ಪ್ರಕರಣಗಳನ್ನು ಬಗೆಹರಿಸುತ್ತಿದ್ದಂತೆ, ಇನ್ನೊಂದು 100 ಪ್ರಕರಣಗಳು ದಾಖಲಾಗಿರುತ್ತವೆ. ಇದಕ್ಕೆ ಕಾರಣ ಜನರಲ್ಲುಂಟಾಗಿರುವ ಕಾನೂನು ಜಾಗೃತಿ ಎನ್ನುವುದು ಸಚಿವರ ನುಡಿ.

ಸದ್ಯ 4.83 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ. ಕೆಳಹಂತದ ನ್ಯಾಯಾಲಯಗಳಲ್ಲಿ 4 ಕೋಟಿಗೂ ಅಧಿಕ ಪ್ರಕರಣಗಳು ಕಾದುಕುಳಿತಿವೆ.

ಸರ್ವೋಚ್ಚ ನ್ಯಾಯಾಲಯದ ಮೇಲೆ 72,000 ಪ್ರಕರಣಗಳನ್ನು ಬಗೆಹರಿಸಬೇಕಾದ ಹೊರೆಯಿದೆ ಎಂದು ರಿಜಿಜು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next