Advertisement

ಸಾಮಾಜಿಕ ಅಂತರಕ್ಕೆ ಗುರುತು

06:07 PM Mar 27, 2020 | Suhan S |

ಹಿರೇಕೆರೂರ: ಕೋವಿಡ್ 19 ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ ತಾಲೂಕಿನಲ್ಲಿ ಗುರುವಾರವೂ ಯಶಸ್ವಿಯಾಗಿ ನಡೆಯಿತು.

Advertisement

ಔಷಧಿ ಅಂಗಡಿಗಳು ಹಾಗೂ ಕೆಲ ಕಿರಾಣಿ ಅಂಗಡಿಗಳು ಮಾತ್ರ ತೆರೆದಿದ್ದವು. ಈ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಗ್ರಾಹಕರು ಸರದಿಯಲ್ಲಿ ದೂರ ದೂರ ನಿಲ್ಲುವಂತೆ ತಾಲೂಕು ಆಡಳಿತದಿಂದ ಗುರುತು ಹಾಕಲಾಯಿತು.

ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಪಡಿತರ ವಿತರಣೆ ಕೇಂದ್ರಗಳ ಎದುರು ಸಹ ಸಾಮಾಜಿಕ ಅಂತರ ನಿರ್ವಹಿಸಲು ಗ್ರಾಪಂನಿಂದ ಗುರುತು ಹಾಕಲಾಗಿತ್ತು. ಹಳ್ಳಿಗಳಲ್ಲಿ ಡಂಗುರು ಸಾರುವ ಮೂಲಕ ಕೋವಿಡ್ 19 ವೈರಸ್‌ ಜಾಗೃತಿ ಮೂಡಿಸಲಾಯಿತು.

ಕೆವವೆಡೆ ರೋಗ ನಿರೋಧಕ ಸಿಂಪರಣೆ ಮಾಡಲಾಯಿತು. ಪ್ರಮುಖ ರಸ್ತೆಗಳಲ್ಲಿ ಕೂಡ ಸಂಚಾರ ತೀರಾ ವಿರಳವಾಗಿತ್ತು. ಜನತೆ ಬೈಕ್‌ಗಳಲ್ಲಿ ಓಡಾಡುವುದು ಕಂಡುಬಂದಿತು. ಪೊಲೀಸರು ಅಲ್ಲಲ್ಲಿ ಬಾರಿಕೇಡ್‌ ಹಾಕಿ ಮುಕ್ತ ಸಂಚಾರಕ್ಕೆ ತಡೆ ಹಾಕಿದ್ದರು. ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next