Advertisement

ICMR ಸಲಹೆ; ಸಕ್ಕರೆ, ಉಪ್ಪು ಬಳಕೆಯಲ್ಲಿ ನಿಯಂತ್ರಣ ಇರಲಿ

01:03 AM May 10, 2024 | Team Udayavani |

ಹೊಸದಿಲ್ಲಿ: ದೇಹದಾರ್ಡ್ಯಕ್ಕಾಗಿ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಸ್ವೀಕರಿಸದಂತೆ ಭಾರತೀಯ ವೈದ್ಯಕೀಯ ಸಂಶೋಧನ ಸಮಿತಿ(ಐಸಿಎಂಆರ್‌) ಸಲಹೆ ನೀಡಿದೆ. ಜತೆಗೆ, ಉಪ್ಪು ಮೇಲೆ ನಿಯಂತ್ರಣ, ಸಕ್ಕರೆ ಅತೀ ಕಡಿಮೆ ಬಳಕೆ, ಸಂಸ್ಕರಿತ ಆಹಾರ ಕಡಿಮೆ ಸ್ವೀಕರಿಸುವುದು ಸೇರಿ “ಭಾರತೀಯರಿಗೆ ಆಹಾರಕ್ರಮ ದ ಮಾರ್ಗದರ್ಶಿ(ಡಿಜಿಐ)’ ಬಿಡುಗಡೆ ಮಾಡಿದೆ. ಪೌಷ್ಟಿಕತೆಯನ್ನು ಪೂರೈಸಲು, ರೋಗಗಳು ಬಾರದಂತೆ ತಡೆಯಲು ಈ ಶಿಫಾರಸುಗಳನ್ನು ಮಾಡಿದೆ. ಹೈ ಪ್ರೋಟಿನ್‌ ಇರುವ ವಸ್ತುಗಳ ದೀರ್ಘ‌ ಸೇವನೆಯಿಂ ದಾಗಿ ಕಿಡ್ನಿಗೆ ಹಾನಿ, ಮೂಳೆ ಖನಿಜ ನಷ್ಟ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾ ಗುತ್ತದೆ. ಒಟ್ಟು ಆಹಾರದಲ್ಲಿ ಸಕ್ಕರೆ ಪ್ರಮಾಣವು ಶೇ.5ಕ್ಕಿಂತ ಕಡಿಮೆ ಇರಬೇಕು ಎಂಬುದು ಸೇರಿದಂತೆ ಅನೇಕ ಶಿಫಾರಸುಗಳನ್ನು ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next