Advertisement

ಐಸಿಸಿಯ ಹೊಸ ನಿಯಮಗಳಿಂದ ಕ್ರಿಕೆಟಿಗರಿಗೆ ಗೊಂದಲ!

06:10 AM Oct 09, 2017 | Team Udayavani |

ರಾಂಚಿ: ಐಸಿಸಿ ಸೆ.28ರಿಂದ ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದು ಬಹುತೇಕ ಕ್ರಿಕೆಟಿಗರಿಗೆ ಗೊಂದಲ ಮೂಡಿಸಿದೆಯಂತೆ. ಅಚ್ಚರಿಯೆಂದರೆ ಭಾರತದ ಖ್ಯಾತ ಆರಂಭಿಕ ಶಿಖರ್‌ ಧವನ್‌ಗೆ ಈ ಬದಲಾವಣೆಗಳು ಗೊತ್ತೇ ಇಲ್ಲವಂತೆ! 

Advertisement

ಐಸಿಸಿ ಹೊಸ ನಿಯಮದ ಪ್ರಕಾರ 10 ಓವರ್‌ಗಿಂತ ಕಡಿಮೆ ಇರುವ ಕ್ರಿಕೆಟ್‌ ಇನಿಂಗ್ಸ್‌ವೊಂದರಲ್ಲೂ ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ಅವಕಾಶವಿದೆ. ಈ ನಿಯಮ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಗೊತ್ತೇ ಇರಲಿಲ್ಲವಂತೆ. ಶನಿವಾರ ಆಸ್ಟ್ರೇಲಿಯಾ ವಿರುದ್ಧದ ಮಳೆ ಬಾಧಿತ ಪಂದ್ಯದಲ್ಲಿ ಭಾರತ 6 ಓವರ್‌ಗೆ 48 ರನ್‌ ಗಳಿಸಬೇಕಾಗಿತ್ತು. ಆಸ್ಟ್ರೇಲಿಯಾ ಬೌಲಿಂಗ್‌ ವೇಳೆ 5 ಓವರ್‌ ಮುಗಿದಿತ್ತು. ಈ ಹಂತದಲ್ಲಿ ಪಂದ್ಯದಿಂದ ಹೊರಗಿದ್ದ ಖಾಯಂ ನಾಯಕ ಸ್ಟೀವ್‌ ಸ್ಮಿತ್‌ ಪಾನೀಯ ತೆಗೆದುಕೊಂಡು ಮೈದಾನಕ್ಕೆ ಬಂದಾಗಲೇ ಈ ವಿಚಾರ ಆಸೀಸಿಗರಿಗೆ ಗೊತ್ತಾಗಿದ್ದು ಎಂದು ಏರಾನ್‌ ಫಿಂಚ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next