Advertisement

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಪಿಚ್‌ ಗುಣಮಟ್ಟ ಕಳಪೆ

11:01 PM Mar 20, 2022 | Team Udayavani |

ಬೆಂಗಳೂರು: ಭಾರತ-ಶ್ರೀಲಂಕಾ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯ ಮಾ. 12ರಿಂದ 14ರ ವರೆಗೆ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದಿತ್ತು. ಇದೀಗ ಪಿಚ್‌ ರಿಪೋರ್ಟ್‌ ಬಂದಿದ್ದು, ಇದು ಕಳಪೆಯಾಗಿದೆ ಎಂದು ಐಸಿಸಿ ವರದಿಯಲ್ಲಿ ತಿಳಿಸಲಾಗಿದೆ.

Advertisement

ಪಿಚ್‌ ಸರಾಸರಿಗಿಂತ ಕಡಿಮೆ ಗುಣಮಟ್ಟವನ್ನು ಹೊಂದಿತ್ತು ಎಂದು ಪಂದ್ಯದ ರೆಫ್ರಿ ಜೆ. ಶ್ರೀನಾಥ್‌ ವರದಿ ನೀಡಿದ್ದಾರೆ. ಒಂದು ದಂಡಾಂಕವನ್ನೂ ಐಸಿಸಿ ವಿಧಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಾಥ್‌, “ಪಂದ್ಯದ ಮೊದಲ ದಿನವೇ ಪಿಚ್‌ನಲ್ಲಿ ಬಹಳ ತಿರುವು ಕಂಡು ಬಂದಿತ್ತು. ಅವಧಿಯಿಂದ ಅವಧಿಗೆ ಚೆಂಡು ತಿರುಗುವುದು ಹೆಚ್ಚುತ್ತಲೇ ಹೋಯಿತು. ನನ್ನ ಅಭಿಪ್ರಾಯದಲ್ಲಿ ಇದು ಚೆಂಡು ಮತ್ತು ಬ್ಯಾಟಿನ ನಡುವಿನ ಹೋರಾಟವಾಗಿ ಕಾಣಿಸಲೇ ಇಲ್ಲ’ ಎಂದು ಹೇಳಿದ್ದಾರೆ.

ಐಸಿಸಿಯಿಂದ ಕಳಪೆ ದರ್ಜೆಯದೆಂದು ಗುರುತಿಸಲ್ಪಟ್ಟ ಪಿಚ್‌ಗಳಿಗೆ ಪಂದ್ಯದ ಆಯೋಜನೆಯ ವೇಳೆ ಮೊದಲ ಆದ್ಯತೆ ಸಿಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next