Advertisement

ಇಬ್ರಾಹಿಂ ಹೇಳಿಕೆ ಗೊಂದಲ: ಸ್ಪಷನೆ ನೀಡಿದ ವೀರೇಂದ್ರ ಪಾಟೀಲ್ ಪುತ್ರ

07:55 PM Feb 05, 2022 | Team Udayavani |

ಚಿಂಚೋಳಿ: ಸಿಎಂ ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಸುಪುತ್ರರನ್ನು ಶೇಖರಣೆ ಮಾಡುತ್ತಿದ್ದೇವೆ ಎಂಬ ಹೇಳಿಕೆಗೆ ಚಿಂಚೋಳಿಯ ಮಾಜಿ ಶಾಸಕ ಕೈಲಾಶ್ ನಾಥ್ ವೀರೇಂದ್ರ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

Advertisement

ಆತ್ಮೀಯ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರೆ ಸಿಎಂ ಇಬ್ರಾಹಿಂ ಅವರು ಇವತ್ತು ಮಾಧ್ಯಮಗಳ ಮುಂದೆ ಹೇಳಿಕೆಯನ್ನು ಕೊಡುವಾಗ ಹೇಳಿಕೆಯನ್ನು ನೀಡಿದ್ದು ಈ ಮೂಲಕ ನಾನು ಸಮಸ್ತ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸ್ಪಷ್ಟಪಡಿಸುತ್ತಾ ಅವರ ಈ ಹೇಳಿಕೆಯನ್ನು ಅಲ್ಲಗಳೆಯುತ್ತಾ ಶ್ರೀಮಾನ್ ವೀರೇಂದ್ರ ಪಾಟೀಲ್ ಅವರ ಮನೆತನ ಕಳೆದ 5-6ದಶಕಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದು ಕಾಂಗ್ರೆಸ್ ಪಕ್ಷವು ನಮ್ಮ ಪೂಜ್ಯ ತಂದೆಯವರಿಗೆ ಹಾಗೂ ನನಗೆ ತುಂಬಾ ಅವಕಾಶಗಳನ್ನು ಒದಗಿಸಿಕೊಟ್ಟಿದ್ದು, ಪಕ್ಷವು ನಮ್ಮ ಮನೆತನದೊಂದಿಗೆ ಸದಾ ಒಳ್ಳೆಯ ಸಂಬಂಧ ಹೊಂದಿದ್ದು ಕಾಂಗ್ರೆಸ್ ಪಕ್ಷವು ನಮ್ಮೊಂದಿಗೆ ಯಾವತ್ತೂ ತುಂಬಾ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದೆ. ಕಾಂಗ್ರೆಸ್ ಪಕ್ಷವನ್ನು ಬಿಡುವಂತಹ ಪ್ರಶ್ನೆಯೇ ಇರುವುದಿಲ್ಲ ಎನ್ನುವುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ವಿಶೇಷವಾಗಿ ನನ್ನ ತವರು ಕ್ಷೇತ್ರವಾದ ಚಿಂಚೋಳಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಈ ಗೊಂದಲದ ಹೇಳಿಕೆಯನ್ನು ನಂಬದೆ ನಾನು ಸದಾ ತಮ್ಮೊಂದಿಗೆ ಹಾಗೂ ಪಕ್ಷದೊಂದಿಗೆ ಇರುತ್ತೇನೆ ಎನ್ನುವಂಥ ವಿಶ್ವಾಸದಿಂದ ಇರಲು ವಿನಂತಿಸುತ್ತೇನೆ ಎಂದು ಕೈಲಾಶ್ ನಾಥ್ ಸ್ಪಷ್ಟ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next