Advertisement

Controversial statement; ಬಾಯಿ ತಪ್ಪಿ ಸಮಂತಾ ಬಗ್ಗೆ ಮಾತನಾಡಿದ್ದೆ: ಸುರೇಖಾ

01:46 AM Oct 04, 2024 | Vishnudas Patil |

ಹೈದರಾಬಾದ್‌: ನಟಿ ಸಮಂತಾ ರುತ್‌ಪ್ರಭು ಹಾಗೂ ನಾಗಚೈತನ್ಯ ವಿಚ್ಛೇದನದ ಕುರಿತು ವಿವಾದ ಸೃಷ್ಟಿಸಿದ್ದ ತೆಲಂಗಾಣ ಸಚಿವೆ ಕೊಂಡ ಸುರೇಖಾ ತಮ್ಮ ಹೇಳಿಕೆ ಯನ್ನು ಹಿಂಪಡೆದಿರುವುದಾಗಿ ಹೇಳಿ ದ್ದಾರೆ. ನಟರ ವೈಯಕ್ತಿಕ ಜೀವನದ ಬಗ್ಗೆ ಬಾಯಿ ತಪ್ಪಿ ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆ ಗಳಿಂದ ಅವರ ಕುಟುಂಬಕ್ಕೆ ನೋವುಂಟಾಗಿದೆ. ಅದರಿಂದ ನನಗೂ ಬೇಸರವಾಗಿದ್ದು, ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ ಎಂದು ಸಚಿವೆ ಹೇಳಿದ್ದಾರೆ.

Advertisement

ಆದರೆ ಕೆ.ಟಿ.ರಾಮರಾವ್‌ ಬಗ್ಗೆ ಹೇಳಿದ ಮಾತುಗಳನ್ನು ಹಿಂದಕ್ಕೆ ಪಡೆ ಯು ವುದಿಲ್ಲ, ಅವರು ಕ್ಷಮೆ ಕೇಳಬೇಕು, ಅವರು ನೀಡಿರುವ ಮಾನನಷ್ಟ ದೂರಿನ ಬಗ್ಗೆ ಕೂನೂನು ಪ್ರಕಾರವೇ ಉತ್ತರಿ ಸುತ್ತೇನೆ ಎಂದಿದ್ದಾರೆ.

ಸುರೇಖಾ ಹೇಳಿಕೆಗೆ ಅಕ್ಕಿನೇನಿ ನಾಗಾ ರ್ಜುನ ನಾಮಪಳ್ಳಿ ಕೋರ್ಟ್‌ನಲ್ಲಿ ಮಾನ ಹಾನಿ ಪ್ರಕರಣ ದಾಖಲಿಸಿದ್ದಾರೆ. ಇಡೀ ತೆಲುಗು ಚಿತ್ರರಂಗ ಸುರೇಖಾ ಹೇಳಿಕೆಯನ್ನು ಖಂಡಿಸಿದೆ. ವಿವಾದದ ಕಾವು ಏರುತ್ತಿರುವಂತೆಯೇ ತೆಲಂಗಾಣ ಸರಕಾರ ವಿವಾದಿಂದ ದೂರ ಸರಿದಿದೆ. ಸಚಿವೆ ಕ್ಷಮೆ ಕೋರಿರುವ ಹಿನ್ನೆಲೆಯಲ್ಲಿ ವಿವಾದ ಮುಂದುವರಿಸುವುದು ಬೇಡ ಎಂದು ತೆಲುಗು ಚಿತ್ರರಂಗಕ್ಕೆ ಸರಕಾರ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next