Advertisement

ಲಂಚ: ರಾಜಸ್ಥಾನ ಎಸಿಬಿಯಿಂದ ಐಎಎಸ್, ಆರ್‌ಎಎಸ್ ಅಧಿಕಾರಿಗಳ ಬಂಧನ

06:55 PM Apr 23, 2022 | Team Udayavani |

ಜೈಪುರ: ನಿರ್ಮಾಣ ಕಾರ್ಯವನ್ನು ಸುಗಮವಾಗಿ ಮಾಡಲು ಬಿಲ್ಡರ್‌ನಿಂದ ಲಂಚ ಪಡೆದಿದ್ದಕ್ಕಾಗಿ ಐಎಎಸ್ ಅಧಿಕಾರಿ ಮತ್ತು ರಾಜಸ್ಥಾನದ ಆಡಳಿತ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ ಶನಿವಾರ ತಿಳಿಸಿದೆ.

Advertisement

5 ಲಕ್ಷ ರೂ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರ್‌ಎಎಸ್ ಅಧಿಕಾರಿ ಅಶೋಕ್ ಸಂಖ್ಲಾ ಮತ್ತು ಅವರ ಬ್ರೋಕರ್ ನಿತಿನ್ ಶರ್ಮಾ ಅವರ ಬಂಧನದ ನಂತರ ಇತ್ತೀಚಿನವರೆಗೂ ಆಲ್ವಾರ್ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿದ್ದ ಐಎಎಸ್ ಅಧಿಕಾರಿ ನನ್ನುಮಲ್ ಪಹಾಡಿಯಾ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಮಹಾನಿರ್ದೇಶಕ ಬಿ ಎಲ್ ಸೋನಿ ಹೇಳಿದ್ದಾರೆ.

ಕಂದಾಯ ಮೇಲ್ಮನವಿ ಅಧಿಕಾರಿಯಾಗಿ ನೇಮಕಗೊಂಡಿರುವ ಸಂಖ್ಲಾ ಅವರು ತಮ್ಮ ನಿರ್ಮಾಣ ಕಾರ್ಯವನ್ನು ಸುಗಮವಾಗಿ ಮಾಡಲು 16 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಬಿಲ್ಡರ್ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಮುಖ್ಯಸ್ಥರು ತಿಳಿಸಿದ್ದಾರೆ.

ಇಬ್ಬರ ಬಂಧನದ ನಂತರ, ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಐಎಎಸ್ ಅಧಿಕಾರಿಯನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಮೂವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಿನೇಶ್ ಎಂ ಎನ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next