Advertisement

ಮಂಚಕ್ಕೆ ಕರೆದಿದ್ದನಂತೆ ಆ ನಿರ್ದೇಶಕ : ಕರಾಳ ಅನುಭವ ಬಿಚ್ಚಿಟ್ಟ ನಟಿ

02:53 PM May 29, 2021 | Team Udayavani |

ಮುಂಬೈ:  ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹಿಂದಿಯ ಕಿರುತೆರೆಯ ಖ್ಯಾತ ನಟಿ ಕಿಶ್ವರ್ ಮರ್ಚೆಂಟ್ , ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಕರಾಳ ಅನುಭವವನ್ನು ರಿವೀಲ್ ಮಾಡಿದ್ದಾರೆ.

Advertisement

ಅವಕಾಶ ಬೇಕೆಂದರೆ ನಟ-ನಿರ್ದೇಶಕರ ಜೊತೆ ಹಾಸಿಗೆ ಹಂಚಿಕೊಳ್ಳಬೇಕು ಎನ್ನುವ ಅನಿಷ್ಠ ಪದ್ಧತಿ ಚಿತ್ರರಂಗದಲ್ಲಿ ಇದೆ ಎಂದು ಕಿಶ್ವರ್ ಹೇಳಿಕೊಂಡಿದ್ದಾಳೆ.  ಸ್ವತಃ ತಾವು ಎದುರಿಸಿದ ಪ್ರಸಂಗವೊಂದನ್ನುವ ಅವರು ಬಿಚ್ಚಿಟ್ಟಿದ್ದಾರೆ.

‘ಚಿತ್ರವೊಂದರ ಕುರಿತು ಮಾತುಕತೆಗೆ ತೆರಳಿದ್ದಾಗ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಯ್ತು. ಅವಕಾಶ ಬೇಕು ಅಂದ್ರೆ ಹೀರೋ ಜೊತೆ ಮಂಚ ಏರಬೇಕು ಅಂತ ನಿರ್ಮಾಪಕರು ನೇರವಾಗಿ ಹೇಳಿದರು. ನಾನು ಅವಕಾಶವೇ ಬೇಡ ಎಂದು ತಿರಸ್ಕರಿಸಿ ಬಂದೆ” ಎಂದು ಕಿಶ್ವೆರ್ ಅವರು ಹೇಳಿದ್ದಾರೆ.  ಈ ಮೀಟಿಂಗ್ ವೇಳೆ ಈ ನಟಿಯ ತಾಯಿ ಕೂಡ ಜೊತೆಗಿದ್ದರಂತೆ.

ಈ ಘಟನೆ ಕುರಿತು ಹೇಳಿರುವ ನಟಿ, ನನಗೆ ಕಾಂಪ್ರಮೈಸ್ ಗೆ ಹೇಳಿದ ನಿರ್ದೇಶಕನಿಗೆ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಇದೆ. ಆ ನಟ ಕೂಡ ಅಷ್ಟೇ ಫೇಮಸ್ ಎಂದಿದ್ದಾರೆ. ಅವರ ಹೆಸರು ಬಹಿರಂಗ ಪಡಿಸಲು ಕಿಶ್ವೆರ್ ಇಚ್ಚಿಸಿಲ್ಲ.

ಇನ್ನು ಕಿಶ್ವರ್  ಅವರು  ‘ಶಕ್ತಿಮಾನ್’, ‘ಕುಟುಂಬ್’, ‘ಕಸೌತಿ ಝಿಂದಗಿ ಕೇ’, ‘ಧಡ್‌ಕನ್’, ‘ಪಿಯಾ ಕಾ ಘರ್’, ‘ಖಯಾಮತ್’, ‘ಕಾವ್ಯಾಂಜಲಿ’, ‘ಗಂಗಾ’ ಮುಂತಾದ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next