Advertisement

Politics: ನ್ಯಾಯಯಾತ್ರೆಗೆ ನನ್ನನ್ನು ಆಹ್ವಾನಿಸಿಯೇ ಇಲ್ಲ: ಅಖೀಲೇಶ್‌

12:06 AM Feb 05, 2024 | Team Udayavani |

ಲಕ್ನೋ: ಇಂಡಿಯಾ ಒಕ್ಕೂಟದ ಪಕ್ಷಗಳ ನಡುವಿನ ಭಿನ್ನಮತ ಸ್ಫೋಟಗೊಳ್ಳುತ್ತಿರುವಂತೆಯೇ “ಉತ್ತರ ಪ್ರದೇಶದಲ್ಲಿ ನಡೆಯಬೇಕಿರುವ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯಯಾತ್ರೆಗೆ ನನಗೆ ಆಹ್ವಾನವೇ ಬಂದಿಲ್ಲ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಅಖೀಲೇಶ್‌ “ಅತಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಮಸ್ಯೆ ಎಂದರೆ ದೊಡ್ಡ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಆಯೋಜಿಸಲಾಗಿರುತ್ತದೆ. ಆದರೆ, ನಮಗೆ ಆಹ್ವಾನವೂ ಇರುವುದಿಲ್ಲ ‘ ಎಂದಿದ್ದಾರೆ. ಈ ಬಗ್ಗೆ ಸಮಜಾಯಿಷಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ “ಉತ್ತರ ಪ್ರದೇಶದ ಯಾತ್ರೆ ವಿವರ ಸಿದ್ದವಾಗಿಲ್ಲ. ಇನ್ನೆರಡು ದಿನಗಳಲ್ಲಿ ಸಿದ್ದವಾಗಬಹುದು. ಬಹುಶಃ ಫೆ.16ರಿಂದ ಯಾತ್ರೆ ನಡೆಯಬಹುದು. ವಿವರ ಸಿದ್ಧವಾದ ಕೂಡಲೇ ಮಿತ್ರ ಪಕ್ಷಗಳಿಗೆ ಕಳುಹಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next