Advertisement

ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ : ಸಿದ್ದರಾಮಯ್ಯ

10:20 AM Mar 09, 2020 | sudhir |

ದಾವಣಗೆರೆ: ಸಿದ್ದರಾಮಯ್ಯ ಬಿಜೆಪಿ ಸೇರಿದರೆ ಕೇಂದ್ರದ ಸಚಿವರಾಗುತ್ತಾರೆ ಎಂಬ ಬಾಬುರಾವ್‌ ಚಿಂಚನಸೂರು ಹೇಳಿಕೆ ಮೂರ್ಖತನದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವತ್ತೂ ಅ ಧಿಕಾರದ ಹಿಂದೆ ಹೋದವನಲ್ಲ.

Advertisement

ಜನರು ಕೊಟ್ಟರೆ ಕೆಲಸ ಮಾಡುತ್ತೇನೆ. ಬಿಜೆಪಿಗೆ ಹೋದವರು ಸಿದ್ದರಾಮಯ್ಯ ಕರೆದರೆ ಬರುತ್ತಾರೆ ಎಂದು ಮಾರ್ಗರೆಟ್‌ ಆಳ್ವಾ ಅವರು ಯಾವ ರೀತಿ ಹೇಳಿದ್ದಾರೋ ಗೊತ್ತಿಲ್ಲ. ನಾನು ಯಾವುದೇ ಬೆದರಿಕೆ ಹಾಕಿಲ್ಲ. ಸಚಿವರಾಗಲು ಹೋದವರು ಪಕ್ಷಕ್ಕೆ ವಾಪಸ್‌ ಬರುತ್ತಾರಾ? ಭೈರತಿ ಬಸವರಾಜ್‌ಗೆ ನಾನೇ ಟಿಕೆಟ್‌ ಕೊಡಿಸಿ ಗೆಲ್ಲಿಸಿದ್ದೆ. ಈಗ ವಾಪಸ್‌ ಬರುತ್ತಾರಾ? ರಾಜಕೀಯ ಸಿದ್ಧಾಂತ ಇದ್ದರೆ ಎಲ್ಲಿಗೂ ಹೋಗುತ್ತಿರಲಿಲ್ಲ. ಅವರೆಲ್ಲರೂ ಅವಕಾಶವಾದಿಗಳು, ಯಾವುದೇ ಕಾರಣಕ್ಕೂ ವಾಪಸ್‌ ಬರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next