Advertisement

“ನಾನು ಕುಡಿದಿದ್ದೆ; ಅವ್ರು ಹೇಳಿದ್ದಕ್ಕೆ ಹೊಡೆದೆ’

03:45 AM Jun 25, 2017 | |

ಬಲ್ಲಾಭ್‌ಗಡ್‌: “ಅವರು ಗೋಮಾಂಸ ತಿನ್ನುವವರು. ಅವರನ್ನು ಬಿಡಬೇಡ, ದಾಳಿ ನಡೆಸು ಎಂದು ನನ್ನ ಗೆಳೆಯರು ಸೂಚಿಸಿದರು. ನಾನು ಮದ್ಯ ಸೇವಿಸಿದ್ದೆ. ಹಾಗಾಗಿ, ಹಲ್ಲೆ ನಡೆಸಿದೆ.’

Advertisement

ದಿಲ್ಲಿಯಿಂದ ಮಥುರಾಗೆ ಹೊರಟಿದ್ದ ರೈಲಿನಲ್ಲಿ 16 ವರ್ಷದ ಮುಸ್ಲಿಂ ಹುಡುಗನನ್ನು ಹೊಡೆದು ಕೊಂದ ಆರೋಪಿಗಳ ಪೈಕಿ ಬಂಧಿತನಾದವ ಹೇಳಿದ ಮಾತಿದು. ಹಲ್ಲೆಕೋರರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಐವರನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರ ಈದ್‌ ಶಾಪಿಂಗ್‌ ಮುಗಿಸಿ ಹರಿಯಾಣ ಬಲ್ಲಾಭ್‌ಗಡ್‌ನ‌ಲ್ಲಿರುವ ಮನೆಗೆ ಆಗಮಿಸುತ್ತಿದ್ದ ವೇಳೆ ಜುನೈದ್‌ ಮತ್ತು ನಾಲ್ವರು ಸಹೋದರರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಸೀಟಿನ ವಿಚಾರಕ್ಕೆ ನಡೆದ ಜಗಳ ತಾರಕಕ್ಕೇರಿದ ಬಳಿಕ, “ಬೀಫ್ ತಿನ್ನುವವರು, ದೇಶದ್ರೋಹಿಗಳು’ ಎಂದು ಆರೋಪಿಸಿ ಥಳಿಸಿದ ಕಾರಣ ಜುನೈದ್‌ ಸ್ಥಳದಲ್ಲೇ ಅಸುನೀಗಿದ್ದ. 

ಇನ್ನೊಂದೆಡೆ, ಮಗನ ಸಾವಿನಿಂದ ಆಘಾತಕ್ಕೊಳಗಾಗಿರುವ ತಾಯಿ ಸಾಯಿರಾ, “ನನ್ನ ಮಗ ದಿಲ್ಲಿಯಲ್ಲಿ ಓದುತ್ತಿದ್ದ. ರಮ್ಜಾನ್‌ ಹಬ್ಬಕ್ಕಷ್ಟೇ ಮನೆಗೆ ಬರುತ್ತಿದ್ದ. ಈಗ ಅವನನ್ನು ಕೊಲೆ ಮಾಡಲಾಗಿದೆ. ನಮ್ಮ ಮೇಲೇಕೆ ಇಷ್ಟೊಂದು ದ್ವೇಷ ಸಾಧಿ ಸುತ್ತೀರಿ,’ ಎಂದು ಪ್ರಶ್ನಿಸಿದ್ದಾರೆ. ಶನಿವಾರ ಸಿಪಿಎಂ ನಾಯಕಿ ಬೃಂದಾ ಕಾರಾಟ್‌ ಸಂತ್ರಸ್ತನ ಮನೆಗೆ ಭೇಟಿ ನೀಡಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next