Advertisement

ನನಗೆ ಹಿಂದುತ್ವವಾದಿಗಳು, ಗೋರಕ್ಷಕರ ಮನೆಗೆ ಹೋಗಬೇಕು : ಪ್ರಮೋದ್‌

02:46 PM Mar 31, 2019 | Vishnu Das |

ಚಿಕ್ಕಮಗಳೂರು: ನನಗೆ ಹಿಂದುತ್ವ, ಗೋಮಾತೆ ಅನ್ನುವವರ ಮನಗೆ ಭೇಟಿ ನೀಡಬೇಕು ಎನ್ನುವ ಆಸೆ ನನಗಿದೆ ಎಂದು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಸಂಘ ಪರಿವಾರಕ್ಕೆ ಟಾಂಗ್‌ ನೀಡಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮನೆಯಲ್ಲಿ ದನಗಳು,ಗಂಡು ಕರುಗಳು, ಹೋರಿಗಳನ್ನು , ಬಂಜೆ ದನಗಳನ್ನು ಸಾಕಿದ್ದರೆ ಹೇಳಿ ಅಲ್ಲಿ ನಾನು ಒಮ್ಮೆ ಭೇಟಿ ನೀಡುತ್ತೇನೆ ಎಂದರು.

ನಾನು ಹೃದಯ ಮತ್ತು ಯೋಚನೆಯಿಂದ ಜಾತ್ಯಾತೀತ ವ್ಯಕ್ತಿ. ಎಂದೂ ಜಾತಿ ಧರ್ಮ ಬೇಧ ಮಾಡಿಲ್ಲ ಎಂದರು.

2004ರಿಂದ ಗೋಶಾಲೆ ನಡೆಸುತ್ತಿರುವ ನಾನು 17 ಗಂಡು ಕರುಗಳನ್ನು ಸಾಕಿದ್ದೇನೆ. ಅವುಗಳು ಈಗ ನನ್ನಷ್ಟೇ ಎತ್ತರಕ್ಕೆ ಬೆಳೆದಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next