Advertisement

ಆಪರೇಷನ್‌ ಕಮಲ ಯಶಸ್ವಿಯಾಗಲ್ಲ ಅಂತ ಪ್ರಧಾನಿಗೆ ಹೇಳಿದ್ದೇನೆ: ಖರ್ಗೆ

12:45 AM Jan 18, 2019 | Team Udayavani |

ಬೆಂಗಳೂರು : ಕರ್ನಾಟಕದಲ್ಲಿ ಆಪರೇಷನ್‌ ಕಮಲ ಮೂಲಕ ಮೈತ್ರಿ ಸರ್ಕಾರ ಕೆಡವಲು ನಿಮ್ಮವರು (ರಾಜ್ಯ ಬಿಜೆಪಿ) ಮುಂದಾಗಿದ್ದು, ಇದು ಯಶಸ್ವಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದೇನೆ ಎಂದು ಲೋಕಸಭೆ ಸಂಸದೀಯ ಪಕ್ಷದ ನಾಯಕರ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಪ್ರಧಾನಿ ಮೋದಿ ಅವರ ಮನೆಯಲ್ಲಿ ಸಭೆ ಇತ್ತು. ಅಲ್ಲಿಗೆ ತೆರಳಿದ್ದಾಗ ಪ್ರಧಾನಿ ಮೋದಿ ಜತೆಗೆ ಆಪರೇಷನ್‌ ಕಮಲದ ಬಗ್ಗೆ ಮಾತನಾಡುವ ಸಂದರ್ಭ ಎದುರಾಯಿತು. ಮೊದಲು ಮೋದಿ ಅವರು “ಕರ್ನಾಟಕದಲ್ಲಿ ಏನು ನಡೆಯುತ್ತಿದೆ? ಎಂದು ಪ್ರಶ್ನಿಸಿದರು. ಅದಕ್ಕೆ ನಾನು ನಿಮ್ಮವರು ಆಪರೇಷನ್‌ ಕಮಲ ಮೂಲಕ ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದರಲ್ಲಿ ನಿಮ್ಮವರು ಯಶಸ್ವಿ ಆಗೋಲ್ಲ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಶಾಸಕರನ್ನ ಸೆಳೆಯೋ ಪ್ರಯತ್ನ ವನ್ನು ಕಾಂಗ್ರೆಸ್‌ ಮಾಡುತ್ತಿದ್ದಾರೆ. ಹೀಗಾಗಿಯೇ, ಬಿಜೆಪಿ ಶಾಸಕರೆಲ್ಲ ಒಂದು ಕಡೆ ಇದ್ದೀವಿ ಅಂತ ಪದೇ ಪದೆ ಹೇಳುತ್ತಿದ್ದಾರೆ. ಒಂದು ವೇಳೆ ನಿಮ್ಮ ಶಾಸಕರ ನಡುವೆ ಒಗ್ಗಟ್ಟು, ನಂಬಿಕೆ ಇದ್ದರೆ ಎಲ್ಲರೂ ಗುರುಗ್ರಾಮದಲ್ಲೇಕೆ ಇರಬೇಕಿತ್ತು ಎಂದು ಪ್ರಶ್ನಿಸಿದ್ದೇನೆಂದರು.

Advertisement

Udayavani is now on Telegram. Click here to join our channel and stay updated with the latest news.

Next