Advertisement

ಹರಿ ಪಾತ್ರವನ್ನು ಎಂಜಾಯ್‌ ಮಾಡಿದ್ದೇನೆ –ನಟ ರಿಷಭ್‌ ಶೆಟ್ಟಿ

12:01 PM Nov 17, 2021 | Team Udayavani |

ನಟ ರಿಷಭ್‌ ಶೆಟ್ಟಿ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಗರುಡ ಗಮನ ವೃಷಭ ವಾಹನ’. ಹೌದು, ಈ ಚಿತ್ರ ನ.19ಕ್ಕೆ ತೆರೆಕಾಣಲಿದೆ. ರಾಜ್‌ ಬಿ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ರಿಷಭ್‌ ಶೆಟ್ಟಿ ಪ್ರಮುಖ ಪಾತ್ರ ಮಾಡಿದ್ದಾರೆ. ರಾಜ್‌ ಶೆಟ್ಟಿ ಇಲ್ಲಿ ಶಿವ ಎಂಬ ಪಾತ್ರ ಮಾಡಿದರೆ ರಿಷಭ್‌ ಹರಿ ಪಾತ್ರ ಮಾಡಿದ್ದಾರೆ.

Advertisement

ಈ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡುವ ರಿಷಭ್‌ ಶೆಟ್ಟಿ, “ನಾನಿಲ್ಲಿ ಹರಿ ಎಂಬ ಪಾತ್ರ ಮಾಡಿದ್ದೇನೆ. ಯಾವುದೇ ಸಂದರ್ಭವನ್ನು ತುಂಬಾ ಸುಲಭವಾಗಿ ಕಂಟ್ರೋಲ್‌ ಮಾಡುವ ಶಕ್ತಿ ಇರುವ ಪಾತ್ರ. ಮೈಥಾಲಜಿಕಲ್‌ ರೆಫ‌ರೆನ್ಸ್‌ನೊಂದಿಗೆ ಪಾತ್ರ ಸಾಗುತ್ತದೆ. ಈ ಪಾತ್ರಕ್ಕೆ ನಾನು ಒಂದಷ್ಟು ತಯಾರಿ ಕೂಡಾ ಮಾಡಿಕೊಂಡೆ.

ಇಡೀ ಸಿನಿಮಾ ರಾಜ್‌ ಶೆಟ್ಟಿಯವರ ಕನಸಿನಂತೆ ಮೂಡಿಬಂದಿದೆ’ ಎನ್ನುತ್ತಾರೆ. ಇನ್ನು, ಚಿತ್ರದ ಹಾಗೂ ರಾಜ್‌ ಶೆಟ್ಟಿಯವರ ನಿರ್ದೇಶನದ ಬಗ್ಗೆ ಮಾತನಾಡುವ ರಿಷಭ್‌, “ರಾಜ್‌ ಶೆಟ್ಟಿಯವರ ಒಂದು ಮೊಟ್ಟೆಯ ಕಥೆ ನೋಡಿ ಖುಷಿಪಟ್ಟು, ಫೋನ್‌ ಮಾಡಿದ್ದೆ. ಈಗ ಅವರ ಸಿನಿಮಾದಲ್ಲೇ ಜೊತೆಯಾಗಿ ಕೆಲಸ ಮಾಡಿದ್ದೇವೆ.

ಇದನ್ನೂ ಓದಿ:- ಮಹಿಳೆಯ ಪಾದ ಕತ್ತರಿಸಿ ಬೆಳ್ಳಿಗೆಜ್ಜೆ ದರೋಡೆ; ಶವ ಪತ್ತೆ, ಆರೋಪಿಗಳು ಪರಾರಿ

ಅವರ ಸ್ಕ್ರಿಪ್ಟ್ ತುಂಬಾ ಬ್ರಿಲಿಯಂಟ್‌ ಆಗಿತ್ತು. ಅವರ ನಿರ್ದೇಶನದ ಶೈಲಿಯನ್ನು ನಾನು ಖುಷಿಯಿಂದ ಅನುಭವಿಸಿದೆ. ನಟರನ್ನು ಯಾವ ರೀತಿ ಬಳಸಿಕೊಳ್ಳಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ರಾಜ್‌ ಶೆಟ್ಟಿ ಬಗ್ಗೆ ಹೇಳುತ್ತಾರೆ. ಮೊದಲೇ ಹೇಳಿದಂತೆ ಇಡೀ ಸಿನಿಮಾ ಶಿವ ಮತ್ತು ಹರಿ ಎರಡು ಪಾತ್ರಗಳ ಸುತ್ತ ಸಾಗುತ್ತದೆ.

Advertisement

ಇವೆರಡೂ ದೇವರ ಹೆಸರು. ಅದರಂತೆ, ಚಿತ್ರದ ಪಾತ್ರಗಳಲ್ಲೂ ಆಯಾ ದೇವರ ಒಂದೊಂದು ಗುಣವನ್ನು ಎರಡು ಪಾತ್ರಗಳು ಪ್ರತಿನಿಧಿಸುತ್ತವೆ. ಶಿವ ಪಾತ್ರ ಕೋಪಿಷ್ಟನಾದರೆ, ಹರಿ ಪಾತ್ರ ಎಲ್ಲವನ್ನು ನಿಯಂತ್ರಿಸುವ ಜೊತೆ ಬದಲಾವಣೆ ತರುವಂತಹ ಹಾದಿಯಲ್ಲಿ ಸಾಗುತ್ತದೆ.

ಒಂದೇ ಮಾತಲ್ಲಿ ಹೇಳುವುದಾದರೆ ಈ ಎರಡು ಪಾತ್ರಗಳು ಒಟ್ಟಾದರೆ ಹೇಗೆ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇನ್ನು, ಗರುಡ ಗಮನ ವೃಷಭ ವಾಹನ’ ಚಿತ್ರದ ಪ್ರೀಮಿಯರ್‌ ಶೋ ಇಂದು ನಡೆಯಲಿದೆ. ಈಗಾಗಲೇ ಬುಕ್ಕಿಂಗ್‌ ಫ‌ುಲ್‌ ಆಗಿದ್ದು, ಈ ಮೂಲಕ ಚಿತ್ರದ ಬಗೆಗಿನ ಕುತೂಹಲ ಹೆಚ್ಚಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next