Advertisement

I.N.D.I. ಒಕ್ಕೂಟಕ್ಕೆ ಶಾಕ್‌ ಮೇಲೆ ಶಾಕ್‌: ಚಂಡೀಗಢ, ಪಂಜಾಬ್‌ನಲ್ಲಿ ಏಕಾಂಗಿ ಸ್ಪರ್ಧೆ: ಆಪ್‌

12:02 AM Feb 11, 2024 | Team Udayavani |

ಖನ್ನಾ: ಪಶ್ಚಿಮ ಬಂಗಾಲ, ಬಿಹಾರ, ಮಹಾರಾಷ್ಟ್ರದ ಬಳಿಕ ವಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ಮತ್ತೂಂದು ಆಘಾತ ಎದುರಾಗಿದ್ದು, ಪಂಜಾಬ್‌, ಚಂಡೀಗಢದ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಆಮ್‌ ಆದ್ಮಿ ಪಕ್ಷ ಶನಿವಾರ ಘೋಷಿಸಿದೆ.

Advertisement

ಪಂಜಾಬ್‌ ಸರಕಾರದ “ಮನೆ ಮನೆಗೆ ಉಚಿತ ಪಡಿತರ’ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರೇ ಸ್ವತಃ ಈ ಘೋಷಣೆ ಮಾಡಿದ್ದಾರೆ. ಜತೆಗೆ, ಸದ್ಯದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿಯೂ ಅವರು ಹೇಳಿದ್ದಾರೆ. ಈ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಮಿತ್ರಪಕ್ಷವಾಗಿ ಸ್ಪರ್ಧಿಸುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದಂತಾಗಿದೆ.

2 ತಿಂಗಳಲ್ಲೇ ಲೋಕಸಭೆ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ 13 ಮತ್ತು ಚಂಡೀಗಢದಲ್ಲಿ 1 ಲೋಕಸಭಾ ಸೀಟುಗಳಿವೆ. ಮುಂದಿನ 10-15 ದಿನಗಳಲ್ಲಿ ಈ ಎಲ್ಲ 14 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಆಪ್‌ ಘೋಷಿಸಲಿದೆ. ಈ ಬಾರಿಯೂ ಆಶೀರ್ವದಿಸಿದರೆ, ಖಂಡಿತಾ ನಾವು ಎಲ್ಲ 14 ಸೀಟುಗಳನ್ನೂ ಗೆಲ್ಲುತ್ತೇವೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಆಪ್‌ನ ಈ ನಡೆ ಇಂಡಿಯಾ ಒಕ್ಕೂಟಕ್ಕೆ ಮತ್ತೂಂದು ರಾಜ್ಯದಲ್ಲಿ ಹಿನ್ನಡೆ ಉಂಟುಮಾಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next