Advertisement

Pralhad Joshi: ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ

12:00 AM Oct 19, 2024 | Team Udayavani |

ಹುಬ್ಬಳ್ಳಿ: ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಸಹೋದರ ಗೋಪಾಲ ಜೋಶಿಗೂ ನನಗೂ 32 ವರ್ಷಗಳಿಂದ ಸಂಪರ್ಕ ಇಲ್ಲ. ಅಲ್ಲದೇ ನನಗೆ ಯಾವ ಸಹೋದರಿಯೂ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

Advertisement

ಈ ಕುರಿತು ಪ್ರಕಟನೆ ನೀಡಿರುವ ಅವರು, ಬೆಂಗಳೂರಿನಲ್ಲಿ ದಾಖಲಾದ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ವಂಚನೆ ಪ್ರಕರಣದಲ್ಲಿ ನನ್ನ ಸಹೋದರಿ ವಿಜಯಲಕ್ಷ್ಮೀ ಎಂದು ಹೆಸರಿಸಲಾಗಿದೆ. ನಮಗೆ ಸಹೋದರಿಯೇ ಇಲ್ಲ. ಗೋಪಾಲ ಜೋಶಿ ಸೇರಿದಂತೆ ನಾವು ನಾಲ್ವರು ಗಂಡು ಮಕ್ಕಳು. ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸಿದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಟಿಕೆಟ್‌ ವಂಚನೆ ಪ್ರಕರಣದಲ್ಲಿ ಗೋಪಾಲ ಜೋಶಿ
ತಪ್ಪು ತನಿಖೆಯಿಂದ ತಿಳಿಯಲಿದೆ. ತಪ್ಪು ಮಾಡಿದ್ದರೆ

ಕ್ರಮ ಕೈಗೊಳ್ಳಲಿ ಎಂದರು. ಈ ಕುರಿತು ಕಾಂಗ್ರೆಸ್‌ ನಾಯಕರು ನನ್ನ ಬಂಧನದ ಹೇಳಿಕೆ ನೀಡಿರುವುದು ಅವರ ಬೌದ್ಧಿಕ ದಿವಾಳಿತನ ಹಾಗೂ ಮುಟಾuಳತನದ ಪ್ರದರ್ಶನ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next