Advertisement

Ayodhya; ನನಗೆ ಆಹ್ವಾನ ಬಂದಿಲ್ಲ…: ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ

05:02 PM Jan 20, 2024 | Team Udayavani |

ಚಿಕ್ಕಬಳ್ಳಾಪುರ: ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ಮಹೋತ್ಸವಕ್ಕೆ ನನಗೆ ಆಹ್ವಾನ ಬಂದಿಲ್ಲ, ಜ. 22ರ ಬಳಿಕ ಆಯೋಧ್ಯೆಗೆ ಹೋಗುತ್ತೇನೆ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ದಿಶಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆಗೆ ನನಗೆ ಆಹ್ವಾನ ಬಂದಿಲ್ಲ. ಬೇರೆ ಯಾರಿಗೆ ಬಂದಿದೆ ಅಂತ ನನಗೆ ಗೊತ್ತಿಲ್ಲ. ಜ.22 ರ ಬಳಿಕ ಅಯೋಧ್ಯೆಗೆ ಹೋಗುತ್ತೇನೆ ಎಂದರು.

ನಾನು ಕೂಡ ರಾಮನ ಭಕ್ತ, ನಮ್ಮೂರಿನಲ್ಲಿ ನಾನು ಹಲವು ವರ್ಷಗಳ ಹಿಂದೆಯೆ ರಾಮನ ದೇವಾಲಯ ಕಟ್ಟಿಸಿದ್ದೇನೆ. ಜತೆಗೆ ಛತ್ರ ಕೂಡ ಕಟ್ಟಿಸಿದ್ದೇನೆ. ಅಲ್ಲಿಗೆ ಹೋಗಿ ರಾಮನ ಸ್ಮರಣೆ ಮಾಡುತ್ತೇನೆ ಎಂದರು.

”ನಾನು ಚುನಾವಣ ರಾಜಕಾರಣದಿಂದ ದೂರ ಸರಿಯುವುದು ಖಚಿತ. ಲೋಕಸಭಾ ಚುನಾವಣೆ ಘೋಷಣೆ ಆಗಲಿ, ಆಗ ನನ್ನ ಬೆಂಬಲ, ತಿರ್ಮಾನ ಹೇಳುತ್ತೇನೆ. ನನ್ನ ಅವಧಿ ಇನ್ನೂ ಮುಗಿದಿಲ್ಲ. ಈಗಲೂ ನಾನು ಬಿಜೆಪಿ ಸಂಸದ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next