Advertisement

ಯತ್ನಾಳ್ ರನ್ನು ದೆಹಲಿ ಬುಲಾವ್ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ: ಸಚಿವ ಬಿ.ಸಿ.ಪಾಟೀಲ್

11:37 AM Feb 22, 2021 | Team Udayavani |

ವಿಜಯಪುರ: ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿರುವ ವಿಚಾರ ನನಗೆ ತಿಳಿದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ಇಟ್ಟಂಗಿಹಾಳ ಬಳಿ ಉದ್ದೇಶಿತ ಫುಡ್ ಪಾರ್ಕ್ ನಿರ್ಮಾಣ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ನಿನ್ನೆ ನಾನು ಬೀದರ್, ಕಲಬುರ್ಗಿ ಜಿಲ್ಲೆಯ ಪ್ರವಾಸದಲ್ಲಿದ್ದೆ. ಹೀಗಾಗಿ ಯತ್ನಾಳ ಅವರನ್ನು ಹೈಕಮಾಂಡ ದೆಹಲಿಗೆ ಕರೆಸಿಕೊಂಡಿರುವ ವಿಷಯ ನನಗೆ ತಿಳಿದಿಲ್ಲ ಎಂದರು.

ಸಮುದಾಯಗಳ ಮೀಸಲು ಹೋರಾಟದಲ್ಲಿ ಯತ್ನಾಳ್ ಮಾತ್ರವಲ್ಲ, ಆಯಾ ಸಮುದಾಯಗಳ ಹಲವು ನಾಯಕರೂ ಪಾಲ್ಗೊಂಡಿದ್ದಾರೆ ಎಂದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡದಿದ್ದರೆ ಸಮಾಜದ ಸಚಿವರು, ವಿವಿಧ ನಿಗಮ, ಮಂಡಳಿ ನೇಮಕಗೊಂಡವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ನಿಲುವುಗಳಿರುತ್ತವೆ. ರಾಜೀನಾಮೆ ನೀಡುವಂತೆ ಯಾರೂ ಬಲವಂತ ಮಾಡಲಾಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next